ಬೀದರ,SBI Bank ATM ಮುಂದೆ ಗುಂಡಿನ ದಾಳಿ ನಡೆಸಿ 1ಕೋಟಿ ರೂಪೇಶ್ ಪರಾರಿಯಾಗಿದ್ದ ದುಷ್ಕರ್ಮಿಗಳ ಬೆನ್ನು ಬಿದ್ದಿರುವ ಪೊಲೀಸರಿಗೆ ಸಾಕಷ್ಟು ಸುಳಿವು ಪತ್ತೆಯಾಗಿದ್ದು, ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾನೆ ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿರುವ ಇಬ್ಬರು ವ್ಯಕ್ತಿಗಳ ಸಂಶಯಾಸ್ಪದ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇವರೇ ಕೃತ್ಯವೆಸಗಿರುವ ಆರೋಪಿಗಳು ಎಂದು ಪೊಲೀಸರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.
ಬೀದರ್ ನಲ್ಲಿ ಗುಂಡಿನ ದಾಳಿ ನಡೆಸುವ ವೇಳೆ ಜಾಕೆಟ್ ಮತ್ತು ಮಾಸ್ಕ್ ಧರಿಸಿದ್ದ ಖದೀಮರು,ಆ ನಂತರ ಹೈದ್ರಾಬಾದ್ ಕಡೆ ತೆರಳಿದ್ದಾರೆ. ಈ ವೇಳೆ ವೇಷ ಬದಲಿಸಿದ್ದು ಅನುಮಾನ ಬರದಂತೆ ವರ್ತಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ಈ ಪೈಕಿ ಒಬ್ಬಾತನನ್ನು ಮನೀಶ್ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಸಹಚರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.ಈ ಆರೋಪಿಗಳ ಹಿಂದೆ ಬಿಹಾರಿ ಗ್ಯಾಂಗ್ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.