09/06/2025 7:50 PM

Translate Language

Home » ಲೈವ್ ನ್ಯೂಸ್ » ಬೀದರಿನ ಶ್ರೀ ಸಮರ್ಥ ರಾಮಮಂದಿರದಲ್ಲಿ
ಫೆ. ೨೨ ರಂದು ಶ್ರೀ ದಾಸ ನವಮಿ ಉತ್ಸವ ಕಾರ್ಯಕ್ರಮ.!

ಬೀದರಿನ ಶ್ರೀ ಸಮರ್ಥ ರಾಮಮಂದಿರದಲ್ಲಿ
ಫೆ. ೨೨ ರಂದು ಶ್ರೀ ದಾಸ ನವಮಿ ಉತ್ಸವ ಕಾರ್ಯಕ್ರಮ.!

Facebook
X
WhatsApp
Telegram

ಬೀದರ.21.ಫೆ.25:-ಬೀದರ ನಗರದ ಪಾಪನಾಶ ಗೇಟ್ ಹತ್ತಿರವಿರುವ ಶ್ರೀ ಸಮರ್ಥ ರಾಮಮಂದಿರದಲ್ಲಿ ಶ್ರೀ ಸಮಥÀð ಸೇವಾ ಮಂಡಲದಿoದ ೨೨-೨-೨೦೨೫ ಶನಿವಾರರಂದು ಶ್ರೀ ದಾಸ ನವಮಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಸಿ.ಎ. ಕಮಲಕಿಶೋರ ಅಟ್ಟಲ್ ಮತ್ತು ಉಪಧ್ಯಕ್ಷರಾದ ನಂದಕಿಶೋರ ರಾಮಕಿಶೋರ ವರ್ಮಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ. ೨೨ ರಂದು ಬೆಳಿಗ್ಗೆ ೯ ಗಂಟೆಯಿAದ ೧೧ ಗಂಟೆಯವರೆಗೆ ಶ್ರೀ ಸಮರ್ಥ ರಾಮದಾಸರ ಪೂಜೆ ಅರ್ಚನೆ ಅಭಿಷೇಕ, ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಯಿAದ  ಮಧ್ಯಾಹ್ನ ೧೨ ಗಂಟೆಯವರೆಗೆ ಶ್ರೀ ದಾಸರ ಮೂರ್ತಿಗೆ ವಿಶೇಷ ಅಲಂಕಾರ ಜರುಗಲಿದೆ. ಮದ್ಯಾಹ್ನ ೧೨ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿದೆ.


ಸದ್ಭಕ್ತರು, ಬೀದರಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದಾಸರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನಿತರಾಗಬೆಕೆಂದು ಕೆ.ಕೆ. ಅಟ್ಟಲ್ ಮತ್ತು ಎನ್. ಆರ್. ವರ್ಮಾ ಅವರು ಮನವಿ ಮಾಡಿಕೊಂಡಿದ್ದಾರೆ.
ಶ್ರೀ ಸಮರ್ಥ ರಾಮದಾಸರ ನವಮಿ ಉತ್ಸವ ದಿನದಂದು ಭಕ್ತರು ಉಪವಾಸ ವೃತ ಮಾಡುತ್ತಾರೆ.

ದಾಸ ಬೋಧ ಪಠಿಸುತ್ತಾರೆ. ಅವರ ಅಧ್ಯಾತ್ಮಿಕತೆ, ನೈತಿಕತೆ, ಮತ್ತು ಪ್ರಾಯೋಗಿಕ ಜೀವನದ ಕುರಿತು ಮಾರ್ಗದರ್ಶನ ಹೊಂದಿರುವ ಅತ್ಯಂತ ಪ್ರಸಿದ್ಧ ಗ್ರಂಥವಾಗಿದೆ. ಮನಸ್ಸು ನಿಯಂತ್ರಣೆಗೆ ಮತ್ತು ಒಳ್ಳೆಯ ಆಲೋಚನೆಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಆತ್ಮಾರಾಮ ಗ್ರಂಥ ಆತ್ಮದ ಸ್ವರೂಪ ಮತ್ತು ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತದೆ. ಪಂಚದಶಿ ಪುಸ್ತಕ ವೇದಾಂತ ಮತ್ತು ತತ್ವಶಸ್ತçದ ವಿವರಣೆ ಹೊಂದಿದೆ.

ರಾಮರಕ್ಷಾ ಸ್ತೊçö್ತoತ್ರವು ರಾಮರ ಮಹಿಮೆ ವೈಭವಿಕರಿಸುತ್ತದೆ. ಹನುಮಾನ ಸ್ತೊçoತ್ರಗಳು ಬಜರಂಗಬಲಿಯ ಪೂಜೆ ಕುರಿತಾಗಿವೆ. ಆರತ್ಯ ಶ್ರೀ ಗಣೇಶ ಶ್ರೀ ರಾಮ ಹನುಮಾನ ದೇವರ ಮೇಲೆ ಸ್ವಾಮಿ ಸಮಥð ರಾಮದಾಸರು ೬೧ ಆರತ್ಯಗಳನ್ನು ರಚಿಸಿದ್ದಾರೆ. ಮತ್ತು ಹನುಮಂತನ ಮೇಲೆ ೭ ಆರತ್ಯಗಳನ್ನು ರಚಿಸಿದ್ದಾರೆ. ಗಣೆಶನ ಮೇಲೆ ೩ ಆರತ್ಯಗಳನ್ನು ರಚಿಸಿದ್ದಾರೆ. ಹೀಗಾಗಿ ಸಮರ್ಥ ರಾಮದಾಸರ ಶ್ರೀ ದಾಸ ನವಮಿ ಉತ್ಸವ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಅಟ್ಟಲ್, ವರ್ಮಾ ತಿಳಿಸಿ ಸರ್ವರಿಗೂ ಆದರದ ಸ್ವಾಗತ ಕೊರಿದ್ದಾರೆ.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!