ಬೀದರ್ ಮಾ ೦೪ಃ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡ ಮಾಡುವ ರಾಜ್ಯಮಟ್ಟದ “ರಾಣಿ ಅಬ್ಬಕ್ಕದೇವಿ” ಪ್ರಶಸ್ತಿಗೆ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಸುರೇಖಾ ಏಂS ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘವು ಕಲಬುರ್ಗಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ಮಾಡುತ್ತಿದೆ. ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಈ ಪ್ರಶಸ್ತಿಗೆ ಭಾಜನರಾದ ಸಾಧಕರ ಸಾಲಿನಲ್ಲಿ ಬೀದರ ವಿಶ್ವ ವಿದ್ಯಾಲಯದ ಕುಲಪತಿಗಳಾದ ಸುರೇಕಾ ಏಂS ಅವರಿರುವುದು ನಮಗೆಲ್ಲರಿಗೂ ಅತ್ಯಂತ ಸಂತಸವಾಗಿದೆ. ಅದು ಅವರ ವ್ಯಕ್ತಿತ್ವಕ್ಕೆ ಸಂದ ಗೌರವ ನಮ್ಮ ಮಹಿಳೆಯರ ಸಾಧನೆಗಳನ್ನು ಗುರುತಿಸಿ ಗೌರವಿಸುತ್ತಿರುವ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘಕ್ಕೆ ಬೀದರಿನ ಸಮಸ್ತ ಜನತೆಯ ಪರವಾಗಿ ಅನಂತ ಧನ್ಯವಾದಗಳು. ಮತ್ತು ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ ಅಭಿನಂದನೆಗಳು ಎಂದು ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಬಿಜೆ ಪಾರ್ವತಿ ವಿ ಸೋನಾರೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಖಾ ಗಡ್ಡೆ, ಕೋಶಾಧ್ಯಕ್ಷರಾದ ಸಿಂಧು ರಘು ಎಚ್.ಎಸ್ ಮತ್ತು ಹಿರಿಯ ಉಪಾಧ್ಯಕ್ಷರಾದ ವೈಶಾಲಿ ದೇವಪ್ಪ, ಪದ್ಮಾವತಿ ಮಡಿವಾಳ, ವಿಜಯಶೀಲಾ Pಆಔ, ಶಕುಂತಲಾ ದಂಡಿ, ಸುಜಾತಾ ಪೂಜಾರಿ, ಭಾನುಪ್ರೀಯಾ ಅರಳಿ, ಡಾ ಸುಧಾರಾಣಿ, ಉಮಾದೇವಿ, ಕಾವೇರಿ ಆರ್ ಫುಲೇಕಾರ, ನರಸಮ್ಮ ಪಾಟೀಲ್, ಶಾರದಾ ಕಮಲ್ಕರ್, ಮಸ್ತಾನ ಬಿ, ವಿಜಯಕುಮಾರಿ ಬಿರಾದರ, ರೇಣುಕಾ ಕೋಟೆ, ವಿದ್ಯಾವತಿ ಹಿರೇಮಠ, ಆರತಿ ಪಾಟೀಲ್, ಸುವರ್ಣಾ ಹೂಗಾರ, ಕ್ಲಾಮೆಂಟೀನಾ ಮುಂತಾದವರು ಹರ್ಷ ವ್ಯಕ್ತ ಪಡಿಸಿದ್ದಾರೆ.
