11/06/2025 5:53 AM

Translate Language

Home » ಲೈವ್ ನ್ಯೂಸ್ » ಬೀದರಿನಲ್ಲಿ ಇಪಿಎಸ್-೯೫ ಪಿಂಚಣಿದಾರರಿoದ ಪ್ರತಿಭಟನೆ

ಬೀದರಿನಲ್ಲಿ ಇಪಿಎಸ್-೯೫ ಪಿಂಚಣಿದಾರರಿoದ ಪ್ರತಿಭಟನೆ

Facebook
X
WhatsApp
Telegram


     ಬೀದರ.26.ಮಾರ್ಚ್25:–ಕಳೆದ ಒಂಭತ್ತು ವರ್ಷಗಳಿಂದ ೭೮ ಲಕ್ಷ ಇಪಿಎಸ್-೯೫ಪಿಂಚಣಿದಾರು ತಮ್ಮ ನ್ಯಾಯೋಚಿತ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ಎರಡು ವರ್ಷಗಳ ಹಿಂದೆ ನೈಜ ವೇತನದ ಮೇರೆಗೆ ಹೆಚ್ಚಿನ ಪಿಂಚಣಿ ನೀಡಲು ಆದೇಶ ನೀಡಿದ್ದರೂ ಸಹ ಎಲ್ಲ ಪಿಂಚಣಿದಾರರು ಏಕೀಕೃತ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಹೆಯಾನ ಕನಿಷ್ಠ ಪಿಂಚಣಿ ೭೫೦೦ ರೂ., ತುಟ್ಟಭತ್ಯೆ ಘೋಷಣೆಯಲ್ಲಿ ಹಾಗೂ ಪಿಂಚಣಿದಾರರಿಗೆ ಉಚಿತ ವೈದ್ಯಕೀಯ ಸೌಲಭ್ಯದಲ್ಲಿ ವಿಳಂಬ ಮತ್ತು ಹೆಚ್ಚಿನ ಪಿಂಚಣಿ ಮಂಜೂರಾತಿಯಲ್ಲಿ ಇಪಿಎಫ್‌ಓ ತೋರುತ್ತಿರುವ ವಿಳಂಬ ನೀತಿ ಮತ್ತು ನಿಷ್ಕಿçÃಯತೆಯನ್ನು ವಿರೋಧಿಸಿ ೨೦೨೫ರ ಮಾರ್ಚ್ ೨೪ ಮತ್ತು ೨೫ರಂದು ದೇಶಾದ್ಯಂತ ಎಲ್ಲ ಇಪಿಎಫ್‌ಓ ಕಚೇರಿಗಳ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ.

ಅದೇರೀತಿ ಬೀದರಿನಲ್ಲಿ ಮಾರ್ಚ್ ೨೫ರಂದು ಮಂಗಳವಾರ ಇಪಿಎಸ್-೯೫ ನ್ಯಾಕ್ ವತಿಯಿಂದ ಪ್ರತಿಭಟನೆ ನಡೆಸಿ ಪ್ರಾವಿಡೆಂಟ್ ಫಂಡ್ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಮ್ಮ ಬೇಡಿಕೆಗಳಿಗೆ ಶೀಘ್ರ ಪರಿಹಾರ ಸಿಗದಿದ್ದರೆ ದೆಹಲಿ ಸೇರಿದಂತೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಪಿಎಸ್-೯೫ ಪಿಂಚಣಿದಾರರು ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಇಪಿಎಸ್ ಪಿಂಚಣಿದಾರರ ಘಟಕದ ಉಪಾಧ್ಯಕ್ಷ ಶಿವಕುಮಾರ ಶೆಟಕಾರ್, ಕಾನೂನು ಸಲಹೆಗಾರ ನರಸಪ್ಪ, ಸಂಯೋಜಕ ಸುರೇಶ ಬಾಬು, ಬಸಯ್ಯ ಸ್ವಾಮಿ, ಸತ್ಯಕುಮಾರ ಮತ್ತಿತರ ಸದಸ್ಯರು ಸೇರಿದಂತೆ ಸುಮಾರು ೬೦ ಸದಸ್ಯರು ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!