ಬೀದರ.07.ಫೆ.25:-ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರ ನೇತೃತ್ವದಲ್ಲಿ ಕೇಂದ್ರ ರೈಲ್ವೆ ರಾಜ್ಯ ಮಂತ್ರಿಯಾದ ವಿ.ಸೋಮಣ್ಣ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಬೀದರದಿಂದ ಬೆಂಗಳೂರುವರೆಗೆ ವಂದೇ ಭಾರತ ರೈಲುನ್ನು ಪ್ರಾರಂಭಿಸಲು ಹಾಗೂ ಬೀದರದಿಂದ -ಬೆಂಗಳೂರು ವಾಯ್ ಕಲ್ಬುರ್ಗಿಗೆ ಹೊಸ ರೈಲು ಪ್ರಾರಂಭಿಸಬೇಕು., ಸೋಲಾಪುರ ಯಶವಂತಪುರ ಎಕ್ಸ್ಪ್ರೇಸ್ನ್ನು ಬೀದರ ಯಶವಂತಪುರ ಎಕ್ಸಪ್ರೇಸಯನ್ನಾಗಿ ಮಾಡಬೇಕು.
ಬೀದರದಿಂದ_ ಬೆಳಗಾವಿ ವಾಯ್ ಕಲಬುರ್ಗಿ ಗುರುಮಿಠಕಲ್, ಬಳ್ಳಾರಿ ಮತ್ತು ಹುಬ್ಬಳ್ಳಿ ರೈಲು ಪ್ರಾರಂಭಿಸಬೇಕು, ಬೀದರ – ನಾಂದೇಡ ವಾಯ್ ಔರಾದ ರೈಲು ಮಾರ್ಗದ ಸರ್ವೆ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಬೇಕು ಹಾಗೂ ಈಗಾಗಲೇ ಈ ಸರ್ವೆ ಕಾರ್ಯಕ್ಕೆ ಅನುಮತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಬಸವಕಲ್ಯಾಣ್ ಶಾಸಕರಾದ ಶರಣು ಸಲಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ,ಕಿರಣ್ ಪಾಟೀಲ ಹಾಗೂ ರಾಜ್ಯ ಪ್ರಶಿಕ್ಷಣ ಸಂಚಾಲಕರಾದ ರಾಜಶೇಖರ್ ನಾಗಮೂರ್ತಿ ಅವರುಗಳು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿ ಮನವಿಯಲ್ಲಿ ಸೂಚಿಸಿದ ಕಾರ್ಯಗಳ ಬಗ್ಗೆ ಸಕಾರತ್ಮಾಕವಾಗಿ ಸ್ಪಂದಿಸಲಾಗುವುದು ಎಂದು ವಿ ಸೋಮಣ್ಣ ಅವರು ಭರವಸೆ ನೀಡಿದರು. ಂದು ಬೀದರ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ ಚೌಧರಿಯವರು ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.