16/06/2025 5:50 AM

Translate Language

Home » ಲೈವ್ ನ್ಯೂಸ್ » ಬೀದರ|ನೀರಿಗಾಗಿ ಪರದಾಡುತ್ತಿರುವ ಕರಕ್ಯಾಳ ಗ್ರಾಮಸ್ಥರು.!

ಬೀದರ|ನೀರಿಗಾಗಿ ಪರದಾಡುತ್ತಿರುವ ಕರಕ್ಯಾಳ ಗ್ರಾಮಸ್ಥರು.!

Facebook
X
WhatsApp
Telegram

>ನೀರಿಗಾಗಿ ಪರದಾಡುತ್ತಿರುವ ಕರಕ್ಯಾಳ ಗ್ರಾಮಸ್ಥರು.


>ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ಕೇಲಸಾ
  ಪೂರ್ಣಗೊಂಡಿಲ್ಲ.


>ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡಿದ ಗ್ರಾಮ.


>ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರೇ ಇಲ್ಲ.


>ಗ್ರಾಮ ಪಂಚಾಯತಿಯಿಂದ ಕರಕ್ಯಾಳ ಗ್ರಾಮ ನಿರ್ಲಕ್ಷಕೆ ಆಗುತ್ತಿದ್ದೆ.

ನೀರಿಗಾಗಿ ಪರದಾಡುತ್ತಿರುವ ಕರಕ್ಯಾಳ ಗ್ರಾಮಸ್ಥರು

  ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಬವಣೆ ಹೆಚ್ಚುತ್ತಿದ್ದು, ಸಣ್ಣ ಮಕ್ಕಳೂ ಸಹ ದೂರದಿಂದ ತಲೆ ಮೇಲೆ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರವತ್ತು ತುಂಬಿದ ವಯೋವೃದ್ಧರು ಎದುರಿಸಿರು ಬಿಡುತ್ತಾ ನೀರಿನ ಕೊಡಹಿಡಿದು ಸಾಗಬೇಕಾಗಿರುವೆ ಅವಸ್ಥೆ ಎದುರಾಗಿದೆ.

ಔರಾದ ತಾಲೂಕಿನ ಕರಕ್ಕಾಳ ಗ್ರಾಮದ ಜನರು ನೀರಿಗಾಗಿ ಪರದಾಡುತ್ತಿರುವ ಕಥೆ, ಔರಾದ್ ತಾಲೂಕಿನ ಎಕಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಕ್ಕಾಳ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಲ್ಲಿ ಗ್ರಾಮ ಪಂಚಾಯತೆ ಅಧಿಕಾರಿಗಳು ನಿಷ್ಕಾಳಜಿ ವಹಿಸುತ್ತಿದ್ದಾರೆ

ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಜನಸಂಖ್ಯೆ ಐದು ಸಾವಿರ ಇದ್ದು, ಇಲ್ಲಿ ಕೇವಲ ಒಂದು ಕೊಳವೆ ಬಾವಿ ಬಾವಿ ಇದೆ. ಆ ಕೊಳವೆಬಾವಿಯಿಂದ ಗ್ರಾಮದ ಎಲ್ಲಾ ಓಣಿಗಳಿಗೆ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ ಕೆಲವೊಂದು ಸಾರಿ ಮೋಟಾರ್ ಕೆಟ್ಟು ಹೋಗಿ ಸರಿಪಡಿಸುವ ತನಕ ಗ್ರಾಮದ ಜನರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ.

ಮೂಲಸೌಕರ್ಯ ಗಳಿಲ್ಲ: ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡಿ ಸರ್ಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ. ಶಾಸಕರಿಗೆ, ಸಂಸದರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಮೂಲಭೂತ ಇಲ್ಲಿಯತನಕ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಸೌಕರ್ಯ ಕೊಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು. ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜೆಜೆಎಂ ಬಂದಿಲ್ಲ: ಜಲ ಜೀವನ್ ಮಿಶನ್ ಯೋಜನೆ ಯಡಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಇನ್ನೂ ಕೆಲಸವನ್ನು ಪೂರ್ತಿಯಾಗಿಲ್ಲ.

ಯೋಜನೆಯಡಿಯಲ್ಲಿ ಒಂದು ಕೊಳವೆ ಬಾವಿ ಯನ್ನು ತೋಡಲಾಗಿತ್ತು. ಆ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಫೇಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮತ್ತೊಂದು ಕೂಡಲೇ ಕೊಳವೆ ಬಾವಿಯನ್ನು ಕೊರೆಸಿ ನೀರನ್ನು ಒದಗಿಸುತ್ತೇವೆ

ನಮ್ಮ ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ನಮ್ಮ ಗ್ರಾಮಕ್ಕೆ  ಧೋರಣೆ ಮಾಡುತ್ತಿದ್ದಾರೆ. ನಮಗೆ ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಬೇಕೆಂದು ವಿನಂತಿಸಿಕೊಳ್ಳುವೆ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು. -ಶಿವರಾಜ್ ಪಂಚಾಕ್ಷರೆ,

ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಜಾರಿಗೊಳಿಸಿರುವ ಜಲ ಜೀವನ್ ಮಿಶನ್ ಯೋಜನೆ ನಮ್ಮ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಒಂದೇ ಒಂದು ಮನೆಗೂ ನಳ ಸಂಪರ್ಕದ ಮೂಲಕ ನೀರು ಬಂದಿಲ್ಲ, ಬೇಸಿಗೆ ಕಾಲ ಇದಾಗಿದ್ದು, ಕೂಡಲೇ ಗ್ರಾಮಸ್ಥರಿಗೆ ನೀರನ್ನು ಒದಗಿಸಿ -ರಾಮ ಸಗರ ಕರಕ್ಯಾಳ ಸೌಕರ್ಯಗಳಿಂದ ವಂಚಿತವಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!