09/06/2025 1:59 PM

Translate Language

Home » ಲೈವ್ ನ್ಯೂಸ್ » ಬೀದರನಲ್ಲಿ ʼಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವರ್ಷದ ವಾರ್ಷಿಕೋತ್ಸವʼ !

ಬೀದರನಲ್ಲಿ ʼಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವರ್ಷದ ವಾರ್ಷಿಕೋತ್ಸವʼ !

Facebook
X
WhatsApp
Telegram

ಬೀದರ.12.ಜನವರಿ.25:- ಇಂದು ಬೀದರ ನಗರದ ಜಾನಪದ ಕಲಾವಿದರ ಸಂಕ್ರತಿಕ್ ಕಾರ್ಯಕ್ರಮ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ಸಂಯೋಗದಲ್ಲಿ ನಡೆದ ʼಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವರ್ಷದ ವಾರ್ಷಿಕೋತ್ಸವʼದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉನ್ನತ ಪದವಿ, ಹುದ್ದೆ ಪಡೆದವರು ಶ್ರೇಷ್ಠರು ಈ ಭಾವನೆ ಬದಲಾಗಬೇಕು. ಹಣದಾಸೆಗೆ ಜೋತು ಬೀಳದೆ ನಮ್ಮ ನೆಲ ಮೂಲದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ತಮ್ಮ ಸರ್ವವಸ್ವವನ್ನು ತ್ಯಾಗಮಾಡಿ ಕಲೆಯನ್ನು ಉಳಿಸುತ್ತಿರುವ ಕಲಾವಿದರು ಶ್

ಇತ್ತಿಚೆಗೆ ತಂತ್ರಜ್ಞಾನ ಹೆಚ್ಚಳದಿಂದ ನಮ್ಮ ಮೂಲದ ಜೋಗುಳ, ಸುಗ್ಗಿ ಹಾಗೂ ಸೋಬಾನೆ ಪದ ಸೇರಿದಂತೆ ವಿವಿಧ ಗೀತಗಾಯನ ಕಲೆಗಳು ನಶಿಸುತ್ತಿವೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಕಲಾವಿದರಿಗೆ ನ್ಯಾಯ, ಸ್ಥಾನಮಾನ, ಗೌರವ ನೀಡುವ ಜೋತೆಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಲಾವಿದರಿಗೆ 50 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 25 ಸಾವಿರ ರೂ. ಹಾಗೂ ತೃತಿಯ ಬಹುಮಾನ ಪಡೆದವರಿಗೆ 15 ಸಾವಿರ ರೂ. ಬಹುಮಾನ ಒಳಗೊಂಡಂತೆ ಪ್ರಮಾಣ ಪತ್ರ ಒದಗಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಮಹಾಸ್ವಾಮಿ, ಕರ್ನಾಟಕ ಗೊಂಡ ಆದಿವಾಸಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ಕಲ್ಯಾಣ ಕಾರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಕನ್ನೆಳಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ್, ನಿಜಶರಣ ಅಂಬಿಗರ ಚೌಡಯ್ಯ ಯುವಸೇನೆ ಅಧ್ಯಕ್ಷ ಸುನಿಲ್ ಚಂದ್ರಕಾಂತ್ ಹಳ್ಳಿಖೇಡಕರ್, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಹರಿಕೃಷ್ಣ, ನಾಗಯ್ಯ ಸ್ವಾಮಿ, ಅಮರೇಶ್ ವೇಷಗಾರ್, ಲಲಿತಾ ಪವಾರ್, ಸುನಿಲ್ ಕಡ್ಡೆ ಹಾಗೂ ನಾರಾಯಣಪ್ಪ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ಸಂದರ್ಭದಲ್ಲಿ ಅನೇಕ ಕಲಾವಿದರು ತುಂಬಾ ಚೆನ್ನಾಗಿ ಕಾರ್ಯಕ್ರ ನಡೆಸಿದ್ರು…ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಇದೆ ಚಪ್ಪಾಳೆ..

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!