08/06/2025 6:45 PM

Translate Language

Home » ಲೈವ್ ನ್ಯೂಸ್ » ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರ ಪರ, ಶಾಸಕ ಪ್ರಭು ಚೌವ್ಹಾಣ್ ಬ್ಯಾಟಿಂಗ್

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರ ಪರ, ಶಾಸಕ ಪ್ರಭು ಚೌವ್ಹಾಣ್ ಬ್ಯಾಟಿಂಗ್

Facebook
X
WhatsApp
Telegram

ಬೀದರ.31.ಜನವರಿ.25: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ರೆಬಲ್‌ ಟೀಂ ಸಿಡಿದೆದ್ದಿದೆ. ಈ ಮಧ್ಯೆ ಔರಂಗ ಬಾದ್‌ ಶಾಸಕ ಪ್ರಭು ಚೌಹಾಣ್‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಬೀದರ್‌ ಜಿಲ್ಲೆಯ ಔರಾದ ತಾಲ್ಲೂಕಿನ ವಡಂಗಾವ್‌ ಗ್ರಾಮದಲ್ಲಿ ಮಾತನಾಡಿದ ಅವರು, ಪಾರ್ಟಿ ದೊಡ್ಡದಾಗಿದೆ, ಮನೆಯಲ್ಲಿ ಜಗಳ ಆದಂತೆ ಜಗಳ ಆಗ್ತಿದೆ ಒಪ್ಪುತ್ತೇನೆ.

ಆದರೆ ಅವರ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ, ಇದು ಅವರಿಗೆ ಗೊತ್ತಿಲ್ಲ. ವಿಜಯೇಂದ್ರ ಅಧ್ಯಕ್ಷರಾದ್ಮೇಲೆ ಪಕ್ಷ ಗಟ್ಟಿಯಾಗಿದೆ. ಎಲ್ಲರೂ ನಮ್ಮ ನಾಯಕರೇ ಈ ರೀತಿ ಮಾಡಬಾರದು. ನಮಗೆ ಸಿಟ್ಟು ಬರ್ತಿದೆ ಅಂತಾ ಭಿನ್ನಮತೀಯರ ವಿರುದ್ಧ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಯಿಯಂತೆ ಪಕ್ಷವನ್ನು ಕಾಣುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ಮೇಲೆ ರಾಜ್ಯದಲ್ಲಿ ಪಕ್ಷಕ್ಕೆ ಚೈತನ್ಯ ಬಂದಿದೆ. ಸರ್ಕಾರಕ್ಕೆ ಭಯ ಉಂಟಾಗಿದೆ, ವಿಜಯೇಂದ್ರ ಯುವಕರಿಗೆ ಪ್ರೋತ್ಸಾಹ ಕೊಡ್ತಿದ್ದಾರೆ. ಇದನ್ನ ನಮ್ಮ ನಾಯಕರು ಸರಿಪಡಿಸುತ್ತಿಲ್ಲ, ನಮಗೆ ನೋವಿದೆ. ನಾನು ಯಾರ ಹೆಸರು ಹೇಳಲ್ಲ, ನಮ್ಮ ನಾಯಕರು ಸರಿಪಡಿಸಬೇಕು.

ಯಡಿಯೂರಪ್ಪ, ಅನಂತಕುಮಾರ್, ಪ್ರಲ್ಹಾದ್ ಜೋಶಿಯವರು ಪಕ್ಷ ಕಟ್ಟಿದ್ದಾರೆ. ಸುಧಾಕರ್ ಬಂದು ನಾಲ್ಕು ವರ್ಷವಾಯ್ತು. ಇಂತಹ ಆರೋಪಗಳನ್ನ ಮಾಡಬಾರದು, ಅದರಲ್ಲಿ ಹುರುಳಿಲ್ಲ. ಮತ್ತು ಇತರರು.

ವಿಜಯೇಂದ್ರ ಅವರಿಂದಲೇ ಸುಧಾಕರ್ ಎಂಪಿ ಆಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ್ರು. ವಿಜಯೇಂದ್ರ, ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಟಿಕೆಟ್ ಕೊಟ್ಟಿದೆ ಎಂಪಿ ಆಗಿದ್ದಾರೆ ಅಂತಾ ವಿಜಯೇಂದ್ರ ಪರವಾಗಿ ಮಾತನಾಡಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!