10/06/2025 3:41 AM

Translate Language

Home » ಲೈವ್ ನ್ಯೂಸ್ » ಬಿಹಾರದಲ್ಲಿ ಬೌದ್ಧ ಧರ್ಮ ಅನುಯಾಯಿಗಳ ಮೇಲೆ ಪೊಲೀಸ್‌ ದೌರ್ಜ ಖಂಡನೆ.!

ಬಿಹಾರದಲ್ಲಿ ಬೌದ್ಧ ಧರ್ಮ ಅನುಯಾಯಿಗಳ ಮೇಲೆ ಪೊಲೀಸ್‌ ದೌರ್ಜ ಖಂಡನೆ.!

Facebook
X
WhatsApp
Telegram

ಔರಾದ.12.ಮಾರ್ಚ.25:- ಇಂದು ಔರಾದ ತಾಲೂಕಾ ಭಾರತೀಯ ಬೌದ್ಧ ಮಹಾಸಭಾ ಹಾಗೂ ಇತರೆ ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿ. ಬಿಹಾರದಲ್ಲಿ ಬೌದ್ಧ ಧರ್ಮದ ಅನುಯಾಯಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ತಾಲೂಕಿನ ಭಾರತೀಯ ಬೌದ್ಧ ಮಹಾಸಭಾ ಹಾಗೂ ಇತರೆ ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿ ಘಟನೆ ಖಂಡಿಸಿವೆ.

ಭಾರತೀಯ ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೆ ಸಮಾನ ಅವಕಾಶವಿದೆ. ಆದರೆ ಬಿಹಾರದಲ್ಲಿ ಬೌದ್ಧವಿಹಾರ ಸಮಿತಿಯಿಂದ ಭಂತೇಜಿ ಅವರನ್ನು ಹೊರಗಿ ಡುವ ಪ್ರಯತ್ನ ನಡೆದಿದೆ. ಈ ನೀತಿಯ ವಿರುದ್ದ ಹೋರಾಡುತ್ತಿರುವ ಭಂತೇಜಿ ಮೇಲೆ ಪೊಲೀಸ್‌ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಂತೇಜಿಗಳ ಮೇಲಿನ ದೌರ್ಜನ್ಯ ತಡೆಯಬೇಕು.

ಬಿಹಾರದ ಬೌದ್ಧ ವಿಹಾರ ಗಳು ಬೌದ್ದ ಭಂತೇಜಿಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಸಂಚಾಲಕ ಸೋಪಾನರಾವ್ ಡೊಂಗರೆ, ಝರೆಪ್ಪ ವರ್ಮಾ, ಶಿವಕುಮಾರ ಕಾಂಬಳೆ, ಪ್ರಕಾಶ ಬಂಗಾರೆ, ಸುಜೀತ್, ರತ್ನದೀಪ ಕಸ್ತೂರೆ, ಸುನೀಲ ಮಿತ್ರಾ, ದಿನೇಶ ಸಿಂಧೆ, ಚಂದು ಡಿ.ಕೆ., ಆನಂದ ಕಾಂಬಳೆ, ಸುಂದರ ಮೇತ್ರೆ, ವಿನೋದ ಕಾಂಬಳೆ ಸೇರಿದಂತೆ ಇನ್ನಿತರರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!