ಬೀದರ.25.ಜುಲೈ.25:- ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಗರದ ಎಂ.ಎ. ಸಮಿ ಸೇರಿ ನಾಲ್ವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದೆ.
ಜನವಾಡದ ಭಗವಾನರಾವ್ ಪಾಂಡ್ರೆ, ಬೀದರ್ನ ಮಂಗಲಪೇಟ್ನ ಏಲಿಜೆಬೆತ್ ಜಯಸೂರ್ಯ ಹಾಗೂ ಭೀಮನಗರದ ವಿನೋದಕುಮಾರ ಗಣಪತರಾವ್ ನಾಮ ನಿರ್ದೇಶನಗೊಂಡ ಇವರು ಮೂವರು.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಈ ಕುರಿತು ಆದೇಶ ಹೊರಡಿಸಿದ್ದಾರೆ. ಎಂ.ಎ. ಸಮಿ ಅವರು ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರಲ್ಲೊಬ್ಬರಾಗಿದ್ದಾರೆ.
ಸದ್ಯ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಳಿದವರೂ ಪಕ್ಷದ ವಿವಿಧ
ಹುದ್ದೆಗಳಲ್ಲಿದ್ದಾರೆ.