ಬೀದರ.19.ಫೆ.25:- ಇಂದು ಮುಂಜಾನೆ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಛತ್ರಪತಿ ಶಿವಾಜಿ ಮಹಾರಾಜರವರ ಭಾವ ಚಿತ್ರಕ್ಕೆ ಪುಷ್ಪಮಾಲೆ ಹಾಕಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕರಾದ ರಾಜಶೇಖರ ನಾಗಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರಪ್ಪ ಔರಾದೆ, ಮಾಧವರಾವ ಹುಷಾರೆ, ಬೀದರ ಕ್ಷೇತ್ರದ ನಾಯಕರಾದ ಈಶ್ವರ ಸಿಂಗ್ ಠಾಕೂರ,ಗುರುನಾಥ ಜಾಂತಿಕರ್ , ರಾಜಕುಮಾರ ಪಾಟೀಲ ನೇಮತಬಾದ , ಸುಭಾಷ ಮಡಿವಾಳ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಾಬುರಾವ ಕಾರುಬಾರಿ, ಬೀದರ ನಗರ ಘಟಕದ ಅಧ್ಯಕ್ಷರಾದ ಶಶಿಹೊಸಳ್ಳಿ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ದೀಪಕ ಗಾದಗೆ, ರಾಜೇಂದ್ರ ಪೂಜಾರಿ, ಸುರಜ್ ಸಿಂಗ್, ಗಣೇಶ ಭೋಸ್ಲೆ, ಮಹಿಳಾ ಮೊರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷಿö್ಮÃ, ಜಿಲ್ಲಾ ಕಾರ್ಯದರ್ಶಿ ಸಂತೋಶಿ, ಮಹಾದೇವಿ , ದಯಾನಂದ ಮೇತ್ರೆ, ಆದಿನಾಥ್ ಹಾಗೂ ಬೀದರ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ ಚೌಧರಿಯವರು ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು.