ಬೀದರ.06.ಮಾರ್ಚ.25:- ಇಂದು ಬಾಳುರು-ಹಾಲಹಿಪ್ಪರಗಾ ಕ್ರಾಸ್ ರಸ್ತೆ (ಜೈನಾಪುರ ಮಾರ್ಗವಾಗಿ) ಅಭಿವೃದ್ಧಿ ಮತ್ತು ವಿವಿಧಕಾಮಗಾರಗೆ ಪ್ರಾರಂ ಮಾಡ್ಕಾಗಿವೆ,
ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ 8.90 ಕೋಟಿ ರೂ. ಅನುದಾನದ ಸಹಯೋಗದಿಂದ ಬೀದರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರ ನೇತೃತ್ವದಲ್ಲಿ ಇಂದು ಭಾಲ್ಕಿ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
✅ ₹4.50 ಕೋಟಿ ಅನುದಾನ: ಬಾಳುರು-ಹಾಲಹಿಪ್ಪರಗಾ ಕ್ರಾಸ್ ರಸ್ತೆ (ಜೈನಾಪುರ ಮಾರ್ಗವಾಗಿ) ಅಭಿವೃದ್ಧಿ.
✅ ₹4.40 ಕೋಟಿ ಅನುದಾನ: ರಾಷ್ಟ್ರೀಯ ಹೆದ್ದಾರಿ-50 ಸಂಪರ್ಕ ಕಲ್ಪಿಸುವ ವಾಲ್ಸಂಗ್, ಬೀರಿ (ಕೆ), ನಾಗರಾಳ, ನಿಟ್ಟೂರು, ಬಾಳುರು, ಹಾಲಹಿಪ್ಪರಗಾ ಕ್ರಾಸ್ ಸಂಪರ್ಕಿಸುವ ರಸ್ತೆ ಸುಧಾರಣೆ.
ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಭಾಲ್ಕಿ ತಾಲೂಕಿನ ಜನತೆಗೆ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಒದಗಿಸಬೇಕೆಂಬ ಉದ್ದೇಶದಿಂದ ಕೈಗೊಳ್ಳಲಾಗಿದೆ. ಈ ಯೋಜನೆಗಳು ಗ್ರಾಮೀಣ ಭಾಗದ ರೈತರು, ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ಮೂಲಕ ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ನೀಡಲಿವೆ.
