09/06/2025 8:20 PM

Translate Language

Home » ಲೈವ್ ನ್ಯೂಸ್ » ಬಾದಲಗಾಂವದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ 134ನೇ ಜಯಂತ್ಯೋತ್ಸವ.

ಬಾದಲಗಾಂವದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ 134ನೇ ಜಯಂತ್ಯೋತ್ಸವ.

Facebook
X
WhatsApp
Telegram

ಔರಾದ್.27.ಏಪ್ರಿಲ್.25:- ಔರಾದ್ ತಾಲೂಕಿನ್ ಬಾದಲಗಾಂವ ಗ್ರಾಮದಲ್ಲಿ ಇಂದು ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ 134ನೇ ಜನ್ಮದಿನದ ಮಹಾ ಉತ್ಸವವು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಶಿವರಾಜ ದೇಶಮುಖ, ನೆಹರೂ ಪಾಟೀಲ, ಆನಂದ ಗಲಗಲೆ, ಪ್ರಕಾಶ ಭಂಗಾರೆ ಹಾಗೂ ಉಪನ್ಯಾಸಕರಾಗಿ ಎನ್ ಎಸ್ ವಾಯ್ ಎಫ್ ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ ಉಪಸ್ಥಿತರಿದ್ದರು.

ಅದೇ ರೀತಿ, ದಿನೇಶ ಶಿಂದೆ, ಆನಂದ ಕಾಂಬಳೆ, ಸುಂದರ ಮೇತ್ರೆ, ಪ್ರಕಾಶ ವನಮರಪಳ್ಳಿ, ಗಂಗರಾಮ ಕಾಂಬಳೆ, ಸೂರ್ಯಕಾಂತ ರಕ್ಷಾಳೆ, ಸಿದ್ಧಾರ್ಥ ಭೂಸಲೆ, ಸೂರ್ಯಕಾಂತ ಶೆರೆಕರ್, ಶಿವಾಜಿ ಶಿಂದೆ, ಚಂದು ಡಿ.ಕೆ, ಜ್ಞಾನು ಭಾಸ್ಕರೆ ಮುಂತಾದ ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಕುಮಾರ ಕಾಂಬಳೆ ಅವರು, “ಬಾಬಾ ಸಾಹೇಬರಿಗೆ ಇಂದು ಜಗತ್ತೆ ತಲೆಬಾಗುತ್ತಿದೆ. ಆದರೆ, ಸಂವಿಧಾನದ ಫಲವನ್ನು ಪಡೆದುಕೊಂಡು ಅವರಿಗೆ ಸರಿಯಾದ ಗೌರವ ನೀಡುವುದು ನಮ್ಮೆಲ್ಲರ ಹೊಣೆಗಾರಿಕೆ. ಬಾಬಾ ಸಾಹೇಬರು ದೇಶದ ಪ್ರತಿಯೊಬ್ಬ ನಾಗರಿಕರ ಉನ್ನತಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರಾಗಿದ್ದಾರೆ. ದಲಿತ ಸಮುದಾಯದವರು ಇಂದು ಭೌತಿಕ ಸೌಕರ್ಯಗಳಲ್ಲಿ ಮುನ್ನುಗ್ಗುತ್ತಿರುವಾಗ ಬಾಬಾ ಸಾಹೇಬರ ತ್ಯಾಗ ಮತ್ತು ತಪಸ್ಸನ್ನು ಪ್ರತಿದಿನವೂ ಸ್ಮರಿಸಬೇಕು,” ಎಂದು ಭಾವುಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಸ್ಥಳೀಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಕೂಡಾ ಭಕ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!