ಬೀದರ.13.ಮೇ.25:- ಕೆಲ ತಿಂಗಳುಗಳಿoದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಕೂಡಲೇ ಬಾಕಿ ಪಾವತಿಸಬೇಕೆಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಮನವಿ ಮಾಡಿದ್ದು, ನಗರದ ಹಲವಾರು ಬಡಾವಣೆಗಳ ನೂರಾರು ಗ್ರಾಹಕರು ಕೆಲ ತಿಂಗಳುಗಳಿAದ ಬಾಕಿ ಇರಿಸಿಕೊಂಡಿದ್ದು, ಅಂಥವರು ಪಾವತಿಸಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಡಾವಣೆಗಳ ವಿವರ: ಬೀದರ ನಗರದ ಗುಂಪಾ, ಮೈಲೂರ್, ಸಿ.ಎಮ್.ಸಿ ಕಾಲೋನಿ, ಸಿದ್ರಾಮಯ್ಯಾ ಲೇಔಟ್ , ಚಿಟ್ಟಾ ಕ್ರಾಸ್, ಚಿದ್ರಿ, ವಿದ್ಯಾನಗರ ಕಾಲೋನಿ, ಹಾರೂರಗೇರಿ, ಬಸವನಗರ, ರಾಂಪೂರೆ ಕಾಲೋನಿ, ಕೆ.ಇ.ಬಿ.ಕಾಲೋನಿ, ನಂದಿ ಕಾಲೋನಿ , ಗಾಂಧಿ ಗಂಜ, ಮಂಗಲ್ ಪೇಟ್, ಗವಾನ್ ಚಾಕ್, ಎಸ್.ಪಿ. ಮನೆ ಹತ್ತಿರ , ನಯಕಮಾನ್ , ಶಾಪೂರ್ ಗೇಟ್ ಎರಿಯಾ, ಶಹಾಗಂಜ, ಅಂಬೇಡ್ಕರ್ ಚೌಕ್, ಭೀಮನಗರ, ನೌಬಾದ್, ಪ್ರತಾಪನಗರ, ಮಾಧವ ನಗರ, ಶಿವನಗರ, ಸಿದ್ದಾಥ9 ಕಾಲೇಜು, ನವದಗೇರಿ, ಚಿಕ್ಕಪೇಟ್, ಮಣಿಗೆ ಲೇಔಟ್, , ಜೇಲ್ ಕಾಲೋನಿ, ಕೆ.ಎಚ್.ಬಿ. ಕಾಲೋನಿ, ಗುರುನಗರ, ದೇವಿ ಕಾಲೋನಿ, ಓಲ್ಡ್ ಆದಶ ಕಾಲೋನಿ, ನ್ಯೂ ಆದರ್ಶ ಕಾಲೋನಿ, ರಾಮನಗರ, ಜ್ಯೋತಿ ಕಾಲೋನಿ, ಯಲ್ಲಾಲಿಂಗ್ ಕಾಲೋನಿ, ಆಟೋನಗರ, ಕೆ.ಆಯ್.ಡಿ.ಬಿ. ಲೇಔಟ್, ಲಾಡಗೇರಿ, ಹೂಗೇರಿ, ಮೋಹನ ಮಾರ್ಕೆಟ್, ಅಕ್ಕಾಮಹಾದೇವಿ ಕಾಲೋನಿ, ಗುನ್ನಳ್ಳಿ, ಗೋರನಳ್ಳಿ, ಹನುಮಾನ ನಗರ, ಮೈಲೂರ್ ಕ್ರಾಸ್, ಎಡನ್ ಕಾಲೋನಿ, ನರಸಿಂಗ್ ಝರನಾ ಮುಂತಾದ ಪ್ರದೇಶಗಳಲ್ಲಿನ ಗ್ರಾಹಕರು ಬಾಕಿ ಇರಿಸಿಕೊಂಡಿದ್ದಾರೆ.
ಈ ಗ್ರಾಹಕರು ತಮ್ಮ ಬಿಲ್ ಬಾಕಿಯನ್ನು ನಿಗದಿತ ದಿನಾಂಕದoದು ಅಥವಾ ಅದಕ್ಕೂ ಮೊದಲು ಪಾಲವತಿಸಲು ಕೋರಲಾಗಿದೆ.
ಒಂದು ತಿಂಗಳಿಗಿoತ ಹೆಚ್ಚು ಕಾಲ ಬಾಕಿ ಪಾವತಿಸದ ಗ್ರಾಹಕರಿಗೆ ಸಂಪರ್ಕ ಕಡಿತಗೊಳಿಸುವ ನೋಟಿಸ್ ನೀಡಿ ನಂತರ ಸಂಪರ್ಕವನ್ನು ಕೊನೆಗೊಳಿಸಲಾಗುತ್ತದೆ.
ಆ ಬಳಿಕ 1976 ಬಾಕಿ ವಸೂಲಾತಿ ಕಾಯ್ದೆಯ ಕೆ.ಇ.ಆರ್.ಸಿ ಸೆಕ್ಷನ್ (4) ರ ಮಾನ ದಂಡಗಳ ಪ್ರಕಾರ ಫಾಮ9 ಎ ಮತ್ತು ಫಾರ್ಮ (ಬಿ) ನೀಡಲಾಗುತ್ತದೆ. ಅಲ್ಲದೇ ಸೆಕ್ಷನ್ 6 ರ ಅನ್ವಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಬಾಕಿ ವಸೂಲಾತಿ ಕಾಯ್ದೆ 1976 ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯ್ದೆಯು ಜೆಸ್ಕಾಂಗೆ ಆಸ್ತಿ ಮುಟ್ಟುಗೋಲಿಗೆ ಅಧಿಕಾರ ನೀಡುತ್ತದೆ.
ಮೇ 31 ರೊಳಗೆ ಬಿಲ್ ಬಾಕಿ ಮೊತ್ತ ಪಾವತಿಸದಿದ್ದರೇ ಅಂತಹ ಗ್ರಾಹಕರಿಗೆ (ವೈಯಕ್ತಿಕ) ಹೆಸರು ಆರ್ ಆರ್. ನಂ. ಬಾಕಿ ಮೊತ್ತದ ವಿವರಗಳನ್ನು ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಲ್ಲದೇ 1976 ರ ಬಾಕಿ ಮರೂ ಪಾವತಿ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.