ರಾಜ್ಯದ ಐವರು ವರಿಷ್ಠ ಬಿಜೆಪಿ ನಾಯಕರಿಗೆ ಶೋಕಾಸ್ ನೋಟಿಸ್ ಹಾಗೂ ಹೈಕಮಾಂಡ್ ಇಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಉಚ್ಚಾಟಿಸಿದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಕಾರಣಕ್ಕೆ ಈ ಬೃಹತ್ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಂಡಿದೆ.
ಇನ್ನು ಈ ಹಿಂದೆ ಇದೇ ಕಾರಣಕ್ಕೆ ಬಿಜೆಪಿ ಪಕ್ಷದ ಶಿಸ್ತು ಸಮಿತಿ ಉತ್ತರ ನೀಡುವಂತೆ ಬಸನಗೌಡ ಪಾಟೀಲ್ ಯತ್ನಾಳ್ಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರ ನೀಡದ ಕಾರಣ ಬಿಜೆಪಿ ಶಿಸ್ತು ಸಮಿತಿ ಇದೀಗ ಉಚ್ಚಾಟನೆಯ ಛಾಟಿ ಬೀಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದಾಗಿನಿಂದಲೂ ಸತತವಾಗಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ.
ಯಡಿಯೂರಪ್ಪ ಬಣ ಈ ಕುರಿತು ಶಿಸ್ತು ಕ್ರಮ ಜರುಗಿಸುವಂತೆ ಹಲವಾರು ಬಾರಿ ಹೈಕಮಾಂಡ್ಗೆ ಪತ್ರ ಬರೆದು ಮನವಿಯನ್ನೂ ಸಹ ಮಾಡಿಕೊಂಡಿತ್ತು. ಇದೀಗ ಯಡಿಯೂರಪ್ಪ ಬೆಂಬಲಿಗರ ಆಶಯ ಈಡೇರಿದೆ.
ಇನ್ನು ಪಕ್ಷದಿಂದ ಉಚ್ಚಾಟನೆಯಾಗಿರುವ ರೆಬೆಲ್ ಶಾಸಕ ಯತ್ನಾಳ್ ಇನ್ನೆಷ್ಟು ರೆಬೆಲ್ ಆಗ್ತಾರೋ ಏನೋ..