ಬಳ್ಳಾರಿ.23.ಫೆ.25:- ರಾಜ್ಯದಲ್ಲಿ ನಕಲಿ ಪ್ರಮಾಣಪತ್ರದ ಹಾವಳಿ ಈಗ ಮಾತೊಂದ ಅಕ್ರಮ ಕಂಡುಬಂದಿದೆ. ಈ ಕಾರಣಕ್ಕೆ ಈಗ 10 ವರ್ಷಗಳಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಲು ನಾವು ತೀರ್ಮಾನಿಸಿದ್ದೇವೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸಹಿ ನಕಲು ಮಾಡಿ, ನೂರಾರು ಮಂದಿಗೆ ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ನೀಡಿರುವುದು ಬಹಿರಂಗವಾಗಿದೆ. ಹೀಗಾಗಿ, ಈ 10 ವರ್ಷಗಳಲ್ಲಿ ಪ್ರಮಾಣ ಪತ್ರಕ್ಕೆಂದು ನೀಡಲಾದ ರಶೀದಿಗಳನ್ನು ಪರಿಶೀಲಿಸಲು ವಿಶ್ವವಿದ್ಯಾಲಯ ಮುಂದಾಗಿದೆ.
ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಗುತ್ತಿಗೆ ನೌಕರರು ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸಂದಾಯ ಆಗಬೇಕಿದ್ದ ಹಣ ನಷ್ಟವಾಗಿದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ವಿಶ್ವವಿದ್ಯಾಲಯದಲ್ಲಿ ಅಕ್ರಮ ವಾಗಿ ವಲಸೆ ಪ್ರಮಾಣ ಪತ್ರ ನೀಡಿದ್ದ ಪ್ರಕರಣ ಇತ್ತೀಚೆಗೆ ಬಯಲಾಗಿತ್ತು. ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯ ಸಿಬ್ಬಂದಿಯೂ ಆಗಿದ್ದ ವೈ.ಕೃಷ್ಣಮೂರ್ತಿ ಎಂಬಾತನನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಘಟಿಕೋತ್ಸವ ಪ್ರಮಾಣ ಪತ್ರದ ಅಕ್ರಮವೂ ಬಯ ಲಾಗಿದೆ. ಇದಕ್ಕಾಗಿ ಕುಲಪತಿಯ ಸಹಿಯ ಸೀಲ್ ಅನ್ನೇ ಗುಪ್ತವಾಗಿ ತಯಾರಿಸಿಟ್ಟುಕೊಳ್ಳಲಾಗಿತ್ತು’ ಎಂದು ಗೊತ್ತಾಗಿದೆ.
ಹೊರಗುತ್ತಿಗೆ ನೌರರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. 10 ವರ್ಷಗಳಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಆಡಳಿತ ವಿಭಾಗದ ಕುಲಸಚಿವ ರುದ್ರೇಶ ಅವರು ತಿಳಿಸಿದರು.