ಬೀದರ.16.ಫೆಬ್ರುವರಿ.25:-ಉಮೇಶ ಬಿ.ಕೆ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಬೀದರ ಅವರ ಆದೇಶದ ಮೇರೆಗೆ ಬೀದರ ಜಿಲ್ಲೆಯ ಬಾಬಾಸಾಹೇಬ ಪಾಟೀಲ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಬೀದರ ಅವರು ಫೆಬ್ರುವರಿ.18 ರಂದು ಬೀದರ ಜಿಲ್ಲೆಯ ಭಾಲ್ಕಿ ಮತ್ತು ಕಮಲನಗರ ತಾಲ್ಲೂಕು ಕೇಂದ್ರಗಳ ಸಕಾರಿ ಕಛೇರಿಯಲ್ಲಿ ಭ್ರಷ್ಟಾಚಾರ ಮತ್ತು ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಹವಾಲು ಸಭೆಗಳ ವಿವರ: ಬಾಬಾಸಾಹೇಬ ಪಾಟೀಲ, ಪೊಲೀಸ್ ನಿರೀಕ್ಷಕರು-3, ಕರ್ನಾಟಕ ಲೋಕಾಯುಕ್ತ ಬೀದರ (ಮೊಬೈಲ್ ಸಂಖ್ಯೆ: 936406274) ಅವರು ಫೆಬ್ರುವರಿ.18 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವಾಸಿ ಮಂದಿರ ಭಾಲ್ಕಿ ಹಾಗೂ ಮಧ್ಯಾಹ್ನ 3 ರಿಂದ 5.30 ರವರಗೆ ಪ್ರವಾಸಿ ಮಂದಿರ ಕಮಲನಗರದಲ್ಲಿ ಸಭೆಗಳು ಜರುಗಿಸಿ ಅಹವಾಲು ಸ್ವೀಕರಿಸಲಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳನ್ನು ವಿಳಂಭ ಮಾಡುತ್ತಿದ್ದರೆ ಕಾರಣ ಇಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಛೇರಿಗೆ ಅಲೆದಾಡಿಸುತ್ತಿದ್ದರೆ ಅಲ್ಲದೆ, ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ನಮ್ಮ ಗಮನಕ್ಕೆ ತರಬಹುದಾಗಿದೆ, ಕಾರಣ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಎಮ್.ಐ.ಜಿ. ನಂ. 29 ಕೆ.ಎಚ್.ಬಿ.ಕಾಲೋನಿ ಬೀದರ ದೂರವಾಣಿ ಸಂಖ್ಯೆ: 936406274, 08482-295445 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.