Home » ಲೈವ್ ನ್ಯೂಸ್ » ಫೆಬ್ರವರಿ 1 ರಂದು ಭಾರತ್‌ ಬಂದ್‌, ಯುಜಿಸಿ ಹೊಸ ನಿಯಮ ಜಾರಿಗೆ ವಿರೋಧ

ಫೆಬ್ರವರಿ 1 ರಂದು ಭಾರತ್‌ ಬಂದ್‌, ಯುಜಿಸಿ ಹೊಸ ನಿಯಮ ಜಾರಿಗೆ ವಿರೋಧ

Facebook
X
WhatsApp
Telegram

ಬೆಂಗಳೂರು.30.ಜನವರಿ.26: ಯುಜಿಸಿ ಹೊಸ ನಿಯಮಗಳು ಭಾರೀ ವಿರೋಧವಾಗಿ, ಉತ್ತರ ಭಾರತದ ಕಡೆ ವಿದ್ಯಾರ್ಥಿಗಳು ರಸ್ತೆಗಿಳಿದು ಬೃಹತ್‌ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ನಡುವೆ ಇಂದು ಸುಪ್ರೀಂ ಕೋರ್ಟ್‌ ಸಹ ಈ ಯುಜಿಸಿ ಹೊಸ ನಿಯಮಗಳು ಬಗ್ಗೆ ಗಂಭೀರವಾಗಿ ಪರಿಗಣನೆಗೆ ಪರಿಗಣನೆ ಮಾಡಲಾಗಿದೆ.

ಫೆಬ್ರವರಿ 1ರಂದು ಇದೀಗ ದೇಶದಾದ್ಯಂತ ಪ್ರತಿಭಟನೆ ಭಾರತ್ ಬಂದ್

ಯುಜಿಸಿ ನಿಯಮದ ವಿರುದ್ಧವಾಗಿ ಈಗಾಗಲೇ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದ್ದು, ಇದೀಗ ಇರ ಮುಂದುವರೆದ ಭಾಗವಾಗಿ ಫೆಬ್ರವರಿ 1ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಫೆಬ್ರವರಿ 1 ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ಮತ್ತು ಬಂದ್ ಮಾಡುವಂತೆ ಅನೇಕ ಸಂಘಟನೆಗಳು ಕರೆ ನೀಡಿವೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಹೊಸ ನಿಯಮಗಳು 2026 ಅನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಗುರುವಾರ ಸತತ ಮೂರನೇ ದಿನವಾದ ಪ್ರತಿಭಟನೆಗಳು ಮುಂದುವರೆದಿವೆ.

ವಿದ್ಯಾರ್ಥಿ ಗುಂಪುಗಳು, ಸಾಮಾಜಿಕ ಸಂಘಟನೆಗಳು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಸೇರಿಕೊಂಡದ್ದು ಫೆಬ್ರವರಿ 1 ರಂದು ಭಾರತ್ ಬಂದ್ ಗೆ ಸಹ ಕರೆ ನೀಡಿದೆ.

ಕರ್ಣಿ ಸೇನೆಯಿಂದ ಪ್ರತಿಭಟನೆ:

ಭಾರತ್ ಬಂದ್ ಕರೆ ನಡುವೆ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ಫೆಬ್ರವರಿ 1 ರಂದು ಹಲವಾರು ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಮಧ್ಯಪ್ರದೇಶದಲ್ಲಿ ಕರ್ಣಿ ಸೇನೆಯು ಇಂದೋರ್‌ನ ದೇವಿ ಅಹಲ್ಯಾ ಬಾಯಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿತು. ಅಲ್ಲಿ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿ ಉಪಕುಲಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು.

ಬಂದ್ ನಂತರ ನಿಯಮಗಳನ್ನು ವಿರೋಧಿಸುವ ಸಂಸದರಿಂದ ಲಿಖಿತ ಭರವಸೆ ಪಡೆಯುವ ಅಭಿಯಾನ ನಡೆಯಲಿದೆ ಎಂದು ಕರ್ಣಿ ಸೇನಾ ನಾಯಕರು ತಿಳಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ, ಮೇಲ್ಜಾತಿಯ ಗುಂಪುಗಳು ಫೆಬ್ರವರಿ 1 ರಂದು ನಗರಾದ್ಯಂತ ಬಂದ್ ಘೋಷಿಸಿದೆ.

ಈ ನಿಯಮಗಳು ಸಮಾಜವನ್ನು ವಿಭಜಿಸುತ್ತವೆ ಎಂದು ಆರೋಪಿಸುತ್ತಿದ್ದಾರೆ. ತ್ವರಿತ ವಿಚಾರಣೆಗೆ ಅವಕಾಶ ನೀಡುವುದರಿಂದ ಮುಗ್ಧ ವ್ಯಕ್ತಿಗಳಿಗೆ ಹಾನಿಯಾಗಬಹುದು ಎಂದು ಹಿರಿಯ ವಕೀಲ ಹಸ್ತಿಮಲ್ ಸಾರಸ್ವತ್ ಹೇಳಿದ್ದಾರೆ.


UGC ಹೊಸ ನಿಯಮಗಳನ್ನ ತಡೆ ಹಿಡಿದ ಸುಪ್ರೀಂ:

ಭಾರತದಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊಸ ನಿಯಮಗಳನ್ನು ಪ್ರಕಟಿಸಿದೆ (UGC Rules 2026). ಆದರೆ ಗುರುವಾರ ಸುಪ್ರೀಂಕೋರ್ಟ್‌ ಈ ನಿಯಮಗಳ ಜಾರಿಗೆ ತಡೆ ನೀಡಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಅವರ ಪೀಠವು ಈ ನಿಯಮಗಳನ್ನ ಪರಿಶೀಲಿಸಿದೆ. ಹಾಗೇ, ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್‌ ಜಾರಿ ಮಾಡಿದೆ.

ಇನ್ನು, ಪ್ರತಿಭಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರಗೊಂಡಿವೆ. ಕೆಲವರು ಈ ನಿಯಮಗಳು ಸಮಾನತೆಯ ಹೆಸರಿನಲ್ಲಿ ವಿಭಜನೆ ಸೃಷ್ಟಿಸುತ್ತವೆ ಎಂದು ಹೇಳುತ್ತಾರೆ. ಆದರೆ ಬೆಂಬಲಿಗರು ಇದು ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸುರಕ್ಷತೆ ನೀಡುತ್ತದೆ ಎಂದು ವಾದಿಸುತ್ತಿದ್ದಾರೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology