ಬೀದರ.28.ಜನವರಿ.25:- ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ) ಹಾಗೂ ಬೀದರ್ ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಬೀದರದಲ್ಲಿ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳವನ್ನು 2025ನೇ ಮಾರ್ಚ.1 ರಿಂದ 3 ರವರೆಗೆ ಆಯೋಜಿಸಲಾಗಿದೆ.
ಕಾರಣ ಈ ಸಮ್ಮೇಳನದಲ್ಲಿ ಭಾಗವಹಿಸುವ ಪಾರಂಪರಿಕ ವೈದ್ಯರುಗಳು ಅಂತರ್ಜಾಲದ (ಅನ್ಲೈನ್) ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ನೋಂದಣಿಯ ಆನ್ಲೈನ್ ಲಿಂಕ್ನ್ನು ಕಳಿಸಲಾಗಿದೆ ಮತ್ತು ಕರ್ನಾಟಕ ಜೀವ ವೈವಿಧ್ಯ ಮಂಡಳಿ ವೆಬ್ಸೈಟ್ https://forms.gle/A7sso6Ky3Vud1jqo6 ನಲ್ಲೂ ಕೂಡ ಆನ್ಲೈನ್ ಸೌಲಭ್ಯ ದೊರೆಯಲಿದೆ.
ಈ ಸದುಪಯೋಗವನ್ನು ರಾಜ್ಯದ ಎಲ್ಲಾ ಪಾರಂಪರಿಕ ವೈದ್ಯರುಗಳು ಬಳಸಿಕೊಳ್ಳಬೇಕೆಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.