09/06/2025 1:13 AM

Translate Language

Home » ಲೈವ್ ನ್ಯೂಸ್ » ಪರಿಶಿಷ್ಟ ಜಾತಿಗೆ ಸೇರಿಸಲು: ಮಡಿವಾಳ ಗುರುಪೀಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಆಗ್ರಹಿಸಿದರು.

ಪರಿಶಿಷ್ಟ ಜಾತಿಗೆ ಸೇರಿಸಲು: ಮಡಿವಾಳ ಗುರುಪೀಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಆಗ್ರಹಿಸಿದರು.

Facebook
X
WhatsApp
Telegram

ಶ್ರೀರಂಗಪಟ್ಟಣ.10.ಮಾರ್ಚ.25:- ರಾಜ್ಯದಲ್ಲಿ  ಮಡಿವಾಳ ಸಮುದಾಯವನ್ನು ಅನ್ನಪೂರ್ಣಮ್ಮ ವರದಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಚಿತ್ರದುರ್ಗದ ಜಗದ್ಗುರು ಮಾಚಿದೇವ ಮಹಾ ಸಂಸ್ಥಾನ ಮಡಿವಾಳ ಗುರುಪೀಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಇಂದು ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ‘ಮನೆ ಮನಕ್ಕೆ ಮಾಚಿದೇವ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಡಿವಾಳ ಜನಾಂಗದ ಪೈಕಿ ಶೇ 98ರಷ್ಟು ಜನರು ಬಟ್ಟೆ ತೊಳೆದು ಜೀವನ ನಡೆಸುತ್ತಿದ್ದಾರೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಗಗನ ಕುಸುಮವಾಗಿದ್ದು, ರಾಜಕೀಯ ಶಕ್ತಿಯೂ ಇಲ್ಲ. ಸಮಾಜದಲ್ಲಿ ನಿಕೃಷ್ಠವಾಗಿ ಬದುಕುತ್ತಿರುವ ಮಡಿವಾಳ ಜನರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಿ ಘನತೆಯಿಂದ ಬದುಕಲು ಅನುವು ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

‘ಅನ್ನಪೂರ್ಣಮ್ಮ ವರದಿಯ ಜಾರಿಗಾಗಿ ಹಲವು ದಶಕಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರಗಳು ಈ ವರದಿಯನ್ನು ಅನುಷ್ಠಾನ ಮಾಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಮಡಿವಾಳರು ಸಂಘಟಿತ ಹೋರಾಟ ನಡೆಸಬೇಕಾಗದ ಅಗತ್ಯವಿದೆ. ಹಾಗಾಗಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾಚಿದೇವರ ಸಂದೇಶಗಳನ್ನು ಮನೆ ಮತ್ತು ಮನಕ್ಕೆ ಮುಟ್ಟಿಸುವ ಕಾರ್ಯವೂ ನಡೆಯುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದು ಹೇಳಿದರು.

ತಾಲ್ಲೂಕಿನ ಆಲಗೂಡು, ಗಂಜಾಂ, ಮರಳಾಗಾಲ, ಅಲ್ಲಾಪಟ್ಟಣ, ಬಾಬುರಾಯನಕೊಪ್ಪಲು, ಪಾಲಹಳ್ಳಿ, ಬೆಳಗೊಳ, ಮಜ್ಜಿಗೆಪುರ, ಕೆಆರ್‌ಎಸ್‌, ನೆಲಮನೆ ಇತರ ಗ್ರಾಮಗಳಲ್ಲಿ ಶನಿವಾರ ಮತ್ತು ಭಾನುವಾರ ಬಸವ ಮಾಚಿದೇವ ಸ್ವಾಮೀಜಿ ಸಂಚರಿಸಿ ಜಾಗೃತಿ ಮೂಡಿಸಿದರು.

ಮಂಡ್ಯ ಜಿಲ್ಲಾ ವೀರ ಮಡಿವಾಳ ಮಾಚಿದೇವರ ಸಹಕಾರ ಸಂಘದ ಅಧ್ಯಕ್ಷ ಬಿ.ಟಿ. ಗುರುರಾಜ್‌, ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ಮುಖಂಡರಾದ ಎಂ.ಎನ್‌. ಶ್ರೀನಿವಾಸ್, ಕೃಷ್ಣಪ್ಪ, ಆಲಗೂಡು ವೆಂಕಟಪ್ಪ, ಗಂಜಾಂ ಪ್ರಸನ್ನ, ಪಾಲಹಳ್ಳಿ ನಾರಾಯಣ್‌ ಇತರರು ಇದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!