08/06/2025 11:07 PM

Translate Language

Home » ಲೈವ್ ನ್ಯೂಸ್ » ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಅಮಾನತು

ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಅಮಾನತು

Facebook
X
WhatsApp
Telegram

ಕಲಬುರಗಿ.31.ಮಾರ್ಚ್.25:-ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧ್ಯೆ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದಕೆ ಪಿಡಿಒ ಅವರು ಬೆದರಿಕೆ ಮತ್ತು ಮಾತಿನ ಚಕಮಕಿ ನಡೆಸಿದಕೆ ಪಿಡಿಒ ಅವರಿಗೆ ಅಮಾನತು ಮಾಡಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ  ಅಡಿ ಮಾಹಿತಿ ಕೋರಿದ್ದ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಅಮಾನತು ಮಾಡಲಾಗಿದೆ.

ಪತ್ರಿಕೆಯೊಂದರ ವರದಿಗಾರ ನಾಗಯ್ಯ ಸ್ವಾಮಿ ಅಲ್ಲೂರು ಅವರು 15ನೇ ಹಣಕಾಸು ಯೋಜನೆಯಡಿ ಖರ್ಚಾದ ಮಾಹಿತಿ ಕೊಡುವಂತೆ ಅಳ್ಳೊಳ್ಳಿ ಗ್ರಾ.ಪಂ.ಗೆ ಆರ್‌ಟಿಐ ಅರ್ಜಿ ಹಾಕಿದ್ದರು. ಖರ್ಚಿನ ಮಾಹಿತಿಯನ್ನು ನೀಡದೆ ಅರ್ಜಿದಾರನಿಗೆ ಫೋನ್ ಕರೆ ಮಾಡಿದ್ದ ದೇವೇಂದ್ರಪ್ಪ, ‘ಬ್ಲಾಕ್‌ಮೇಲ್ ಮಾಡಲು ಅರ್ಜಿ ಹಾಕಿದ್ದೀಯಾ, ಪೊಲೀಸರಿಗೆ ದೂರು ಕೊಟ್ಟು ಒಳ ಹಾಕಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದರು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನಾಗಯ್ಯ ಸ್ವಾಮಿ ಅವರು ಚಿತ್ತಾಪುರ ಕಾರ್ಯನಿರ್ವಾಹಕ ಅಧಿಕಾರಿಗೆ (ಇಒ) ದೂರು ಸಲ್ಲಿಸಿದ್ದರು. ದೇವೇಂದ್ರಪ್ಪ ಅವರಿಗೆ ಇಒ ನೋಟಿಸ್‌ ನೀಡಿದ್ದರೂ ಸಮಜಾಯಿಷಿ ನೀಡಿರಲಿಲ್ಲ.

ಜತೆಗೆ ಆರ್‌ಟಿಐ ಅಡಿ ಮಾಹಿತಿಯೂ ಕೊಡದೆ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ದೇವೇಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!