ಬೀದರ, ನವೆಂಬರ್.21:- ಪ್ರತಿವರ್ಷ ನವೆಂಬರ್.14 ರಂದು ಮಕ್ಕಳ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
ಆ ಪ್ರಯುಕ್ತ ಈ ಬಾರಿ ಜಿಲ್ಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್.25 ರಂದು ವಿನೂತನವಾಗಿ ಆಚರಿಸಲು ಜಿಲ್ಲಾಡಳಿತದ ವತಿಯಿಂದ ನಿರ್ಧರಿಸಲಾಗಿದೆ. ಸದರಿ ದಿನದಂದು ಶಾಲಾ ಮಕ್ಕಳಿಗೆ ಆಡಳಿತವನ್ನು ಪರಿಚಯಿಸುವುದು ಹಾಗೂ ಆತ್ಮವಿಶ್ವಾಸವನ್ನು ತುಂಬುವ ಸಲುವಾಗಿ ಅಂದು ಮಕ್ಕಳು ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಪರಿಚಯಾತ್ಮಕ ಕಾರ್ಯಕ್ರಮವನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ, ತಾಲ್ಲೂಕಿನ ಎಲ್ಲಾ ಇಲಾಖೆಗಳ ಕಾರ್ಯವೈಖರಿಯನ್ನು ಪರಿಚಯಿಸಲು ಒಂದೊAದು ಶಾಲೆಯಿಂದ 08 ರಿಂದ 10ನೇ ತರಗತಿಯ 10 ಮಕ್ಕಳನ್ನು ಗುರುತಿಸಿ ಒಂದೊAದು ಕಛೇರಿಗೆ ಕಳುಹಿಸಲು ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೀದರ ಅವರು ಕ್ರಮವಹಿಸಬೇಕು.
ಇಲಾಖಾ ಮುಖ್ಯಸ್ಥರು ಅಂದು ಮಕ್ಕಳನ್ನು ಆತ್ಮಿಯವಾಗಿ ಸ್ವಾಗತಿಸಿ ತಮ್ಮ ಸ್ಥಾನದಲ್ಲಿ ಕೂರಿಸಿ ತಮ್ಮ ಕಾರ್ಯಭಾರ ಹಾಗೂ ಇಲಾಖಾ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವುದು ಅಲ್ಲದೇ ಕಛೇರಿಯ ಪ್ರತಿ ಶಾಖೆಗೆ ಕರೆದುಕೊಂಡು ಹೋಗಿ ಕಾರ್ಯವೈಖರಿಯನ್ನು ಪರಿಚಯಿಸುವುದು. ತಮ್ಮ ಕಛೇರಿಯ ದೈನಂದಿನ ಕಾರ್ಯಗಳಾದ ಸಭೆಗಳಿಗೆ ಹಾಜರಾಗುವುದು, ಕಛೇರಿ ಕಾರ್ಯನಿರ್ವಹಣೆ ಹಾಗೂ ಕ್ಷೇತ್ರ ಭೇಟಿಯನ್ನು ಅಧಿಕಾರಿಗಳು ಮಕ್ಕಳೊಂದಿಗೆ ಮಾಡುವುದು.
ಅಂದು ಮಧ್ಯಾಹ್ನ 3 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಜರುಗುವ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಬೀದರನ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಛೇರಿಗೆ ಆಗಮಿಸಿದ ಮಕ್ಕಳೊಂದಿಗೆ ಹಾಜರಾಗುವುದು. ಅದರಲ್ಲಿ ಕನಿಷ್ಠ 2 ರಿಂದ 3 ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ. ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಲು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.