10/06/2025 8:06 AM

Translate Language

Home » ದೇಶ » ನ.23 ರಂದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರೈಸಿಂಗ್ ದಿನ ಆಚರಣೆ ನಿಮಿತ್ಯ
ರಕ್ತದಾನ ಜಾಗೃತಿ ರ‍್ಯಾಲಿ ಮತ್ತು ರಕ್ತದಾನ ಶಿಬಿರ ಆಯೋಜನೆ

ನ.23 ರಂದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರೈಸಿಂಗ್ ದಿನ ಆಚರಣೆ ನಿಮಿತ್ಯ
ರಕ್ತದಾನ ಜಾಗೃತಿ ರ‍್ಯಾಲಿ ಮತ್ತು ರಕ್ತದಾನ ಶಿಬಿರ ಆಯೋಜನೆ

Facebook
X
WhatsApp
Telegram

ಬೀದರ, ನವೆಂಬರ್.21:- ಬೀದರ ಪೊಲೀಸ್ ಮತ್ತು ಬ್ರಿಮ್ಸ್ ಆಸ್ಪತ್ರೆಯ ಸಮನ್ವಯದಲ್ಲಿ 3 ಕರ್ನಾಟಕ ಏರ್ ಎನ್‌ಸಿಸಿ ಬೀದರ ವತಿಯಿಂದ ನವೆಂಬರ್.23 ರಂದು ರಾಷ್ಟಿçÃಯ ಕೆಡೆಟ್ ಕಾರ್ಪ್ಸ್ ರೈಸಿಂಗ್ ದಿನವನ್ನು ಆಚರಿಸುವ ನಿಮಿತ್ಯ ರಕ್ತದಾನದ ಮಹತ್ವದ ಬಗ್ಗೆ ಅರಿವು ಹೆಚ್ಚಿಸಲು ಮತ್ತು ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಎನ್‌ಸಿಸಿ ಕೆಡೆಟ್‌ಗಳಲ್ಲಿ ನಿರ್ದಿಷ್ಟವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಲು ರಕ್ತದಾನ ಜಾಗೃತಿ ರ‍್ಯಾಲಿ ಮತ್ತು ಬ್ರಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗ್ರೂಪ್ ಕ್ಯಾಪ್ಟನ್ ವಿಎನ್‌ಎಲ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗೃತಿ ರ‍್ಯಾಲಿಯು ಬೆಳಿಗ್ಗೆ 9 ಗಂಟೆಗೆ ಬ್ರಿಮ್ಸ್ ಆಸ್ಪತ್ರೆಯಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತ್, ಶಿವಾಜಿ ವೃತ್ತ, ನೆಹರು ಕ್ರೀಡಾಂಗಣದ ಮೂಲಕ ಬ್ರಿಮ್ಸ್ ಆಸ್ಪತ್ರೆಗೆ ಸಾಗಲಿದೆ. ರ‍್ಯಾಲಿಯಲ್ಲಿ ಒಟ್ಟು 120 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಲಿದ್ದು, 50 ಕೆಡೆಟ್‌ಗಳು ಈ ದಿನ ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರೂಪ್ ಕ್ಯಾಪ್ಟನ್ ವಿಎನ್‌ಎಲ್ ರೆಡ್ಡಿ, ಕಮಾಂಡಿAಗ್ ಆಫೀಸರ್ 3 ಕಾರ್ ಏರ್ ಎನ್‌ಸಿಸಿ ಬೀದರ, ಎನ್‌ಸಿಸಿ ಸಿಬ್ಬಂದಿ, ಗುರುನಾನಕ ದೇವ್ ಇಂಜಿನೀಯರಿAಗ್ ಕಾಲೇಜಿನ ಸಹಾಯಕ ಎನ್‌ಸಿಸಿ ಅಧಿಕಾರಿ ಫ್ಲೆöÊಟ್ ಲೆಫ್ಟಿನೆಂಟ್ ಅನೂಪ್ ಕುಮಾರ್ ಎಲಿಯಾ ಮತ್ತು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಹಾಯಕ ಎನ್‌ಸಿಸಿ ಅಧಿಕಾರಿ ಫ್ಲೆöÊಯಿಂಗ್ ಆಫೀಸರ್ ನಾಗರಾಜ್ ಭಾಗವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!