ಬೀದರ.15.ಮೇ.25:- ಬೀದರ ಜಿಲ್ಲೆಯಲಿ ್ಲ “ರಾಷ್ಟç ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ ಪಹಲಗಾಮನಲ್ಲಿ ನಮ್ಮ ಸಹೋದರಿಯರ ಸಿಂಧೂರ ಕಸಿದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ “ ಆಪರೇಷನ್ ಸಿಂಧೂರ ” ಮುಖಾಂತರ ಉಗ್ರರ ನೆಲೆಗಳನ್ನು ಹಾಗೂ ಅವರ ಪೋಷಕ ಪಾಕಿಸ್ತಾನದ ಸೇನಾ ನೆಲೆಗಳನ್ನು ನಾಶಪಡಿಸಿ ವಿಶ್ವಕ್ಕೆ ಭಾರತದ ಸೈನ್ಯಶಕ್ತಿಯನ್ನು ತೋರಿಸಿದ ಸೈನಿಕರಿಗೆ ಗೌರವಾರ್ಥವಾಗಿ ನಗರದಲ್ಲಿ ನಾಳೆ ಅಂದರೆ ಮೇ ೧೭ ಶನಿವಾರದಂದು ತಿರಂಗಾ ಯಾತ್ರೆ ಜರುಗಲಿದೆ ಎಂದು ಶಾಸಕರಾದ ಡಾ. ಶೇಲೈಂದ್ರ ಬೆಲ್ದಾಳೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಸದಸ್ಯರಾದ ಸೋಮನಾಥ ಪಾಟೀಲ ಹುಡಗಿ ಅವರುಗಳು ಜಂಟಿಯಾಗಿ ತಿಳಿಸಿದ್ದಾರೆ.
ಈ ಯಾತ್ರೆಯು ಮುಂಜಾನೆ ೦೯:೦೦ ಗಂಟೆಗೆ ಭೂಮರೆಡ್ಡಿ ಕಾಲೇಜಿನಿಂದ ಎದರುಗಡೆ ಇರುವ ಬಸವ ಮುಕ್ತಿ ಮಂದಿರದಿoದ ಪಾದಯಾತ್ರೆ ಪ್ರಾರಂಭಗೊoಡು ೧೦:೩೦ ಗಂಟೆಗೆ ಶಿವಾಜಿ ಮಹಾರಾಜರ ವೃತ್ತದಲ್ಲಿ ಸಮಾರೊಪಗೊಳ್ಳಲಿದೆ.
ಜಿಲ್ಲೆಯ ಮಠಾಧೀಶರು ಹಾಗೂ ಮಾಜಿ ಸೈನಿಕರ ನೇತ್ರತ್ವದಲ್ಲಿ ಜರುಗಲಿರುವ ಈ ಯಾತ್ರೆಯಲ್ಲಿ ವಕೀಲರು, ವೈದ್ಯರು, ಇಂಜಿನೀಯರಗಳು, ವ್ಯಾಪಾರಸ್ಥರು, ಎಲ್ಲಾ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ, ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು, ಹಾಗೂ ದೇಶ ಭಕ್ತನಾಗರಿಕರು ಕೈಯಲ್ಲಿ ರಾಷ್ಟçಧ್ವಜ (ತಿರಂಗಾ) ಹಿಡಿದುಕೊಂಡು ಭಾರತಮಾತೆ ಹಾಗೂ ಸೈನಿಕರಿಗೆ ಜಯಘೊಶ ಮೊಳಗಿಸುತ್ತo್ತ ಪಾದಯಾತ್ರೆ ಮಾಡಲಿದ್ದಾರೆ.
ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ದೇಶ ಹಾಗೂ ಸೈನಿಕರಿಗಾಗಿ ಜರಗುವ ಈ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಎಲ್ಲಾ ದೇಶಭಕ್ತ ನಾಗರಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಂದು ಮುಂಜಾನೆ ೦೯:೦೦ ಗಂಟೆಗೆ ಬಸವ ಮುಕ್ತಿ ಮಂದಿರಕ್ಕೆ ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆ ಮುಖಾಂತರ ಮನವಿ ಮಾಡಿದ್ದಾರೆ.