08/06/2025 7:24 PM

Translate Language

Home » ಲೈವ್ ನ್ಯೂಸ್ » ನಾಗರೀಕ ಜೀವನ ಗುಣಮಟ್ಟ ಸುಧಾರಣೆಗೆ ಸುಸ್ಥಿರ
ಇಂಧನದ ಪಾತ್ರ ಮಹತ್ವದ್ದಾಗಿದೆ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ನಾಗರೀಕ ಜೀವನ ಗುಣಮಟ್ಟ ಸುಧಾರಣೆಗೆ ಸುಸ್ಥಿರ
ಇಂಧನದ ಪಾತ್ರ ಮಹತ್ವದ್ದಾಗಿದೆ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Facebook
X
WhatsApp
Telegram


ಬೀದರ, ಡಿಸೆಂಬರ್.4 (ಕರ್ನಾಟಕ ವಾರ್ತೆ):- ನಗರ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಳಗನ್ನು ಬೆಂಬಲಿಸುವಾಗ ನಾಗರೀಕ ಜೀವನ ಗುಣಮಟ್ಟ ಸುಧಾರಣೆಗೆ ಸುಸ್ಥಿರ ಇಂಧನದ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಅವರು ಇತ್ತೀಚಿಗೆ ನಗರದ ಶ್ರೀ ಗುರುದ್ವಾರಾ ಶ್ರೀನಾನಕ ಝಿರಾ ಸಾಹೆಬ್ ಲಂಗರನಲ್ಲಿ ಸ್ಥಾಪಿಸಲಾಗಿರುವ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೀದರ ಜಿಲ್ಲೆಯಲ್ಲಿ ಗ್ಯಾಸ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈರ್ಸಗಿಕ ಅನಿಲ ಸಂಪರ್ಕವನ್ನು ಸ್ಥಾಪಿಸಿರುವುದಕ್ಕೆ ಬಿಪಿಸಿಎಲ್ ಕಂಪನಿಯ ಪ್ರಯತ್ನಗಳನ್ನು ಶ್ಲಾಘಿಸಿದರು.
ಗ್ರಾಹಕರ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಲು ಬಿಪಿಸಿಎಲ್ 9901693254 ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಸೇವೆಗಳಿಗೆ ಸಂಬAಧಿಸಿದAತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ. ಸಿ.ಜಿ.ಡಿ.ಯೋಜನೆಯು ಸ್ವಚ್ಛವಾದ, ವೆಚ್ಚ ಪರಿಣಾಮಕಾರಿ ಮತ್ತು ಸುರಕ್ಷಿತ ಇಂಧನ ಪರಿಹಾರಗಳತ್ತ ಒಂದು ಮಹತ್ತರ ಹೆಜ್ಜೆಯನ್ನಾಗಿ ಪ್ರತಿನಿಧಿಸುತ್ತದೆ, ಇದು ಹಸಿರು ಮತ್ತು ಹೆಚ್ಚು ಶಕ್ತಿ ಸಮರ್ಥ ಭವಿಷ್ಯದ ದೃಷ್ಟಿ ಹೊಂದಲಾಗಿದೆ ಎಂದರು.
ಭಾರತ ಪೆಟ್ರೋಲಿಯಂ ಕಾರ್ಪೊಎ಼ನ್ ಲಿಮಿಟೆಡ್ (ಬಿಪಿಸಿಎಲ್) ನೇತೃತ್ವದಲ್ಲಿ ಸಿಜಿಡಿ ಯೋಜನೆಯು ಬೀದರ ಭೌಗೋಳಿಕ ಪ್ರದೇಶದಲ್ಲಿ ಸಮಗ್ರ ಅನಿಲ ಜಾಲವನ್ನು ಅಭಿವೃದ್ಧಿ ಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಭಾಗವಾಗಿರುತ್ತದೆ. ಈ ಸಂಕುಚಿತ ನೈಸರ್ಗಿಕ ಅನಿಲ ಕೇಂದ್ರಗಳು ಮತ್ತು ಸಿ.ಎನ್.ಜಿ. ಹಾಗೂ ಪಿ.ಎನ್.ಜಿ.ಯನ್ನು ದೇಶೀಯ, ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ತಲುಪಿಸಲು ಸದರಿ ಕಂಪನಿಯು ಗುರಿಯನ್ನಾಗಿಸಿಕೊಂಡಿದೆAದರು.
ಪ್ರಸ್ತುತ ಬೀದರ ಜಿಲ್ಲೆಯ ಆರು ತಾಲ್ಲೂಕುಗಳನ್ನು ಒಳಗೊಂಡು 14 ಸಿ.ಎನ್.ಜಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಿಪಿಸಿಎಲ್ ವತಿಯಿಂದ ಮಾರ್ಚ 2025 ರೊಳಗಾಗಿ ಇನ್ನೂ ಎಂಟು ನಿಲ್ದಾಣಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಿಕೊಂಡಿದೆ. ಇದರಿಂದಾಗಿ ಆಟೊಮೊಬೈಲ್ ವಲಯದಲ್ಲಿ ಗಮನಾರ್ಹ ಹೆಜ್ಜೆಯಾಗಿದ್ದು ವಾತಾವರಣ ಸಂರಕ್ಷಣೆಯಲ್ಲಿಯೂ ತುಂಬಾ ಅನುಕೂಲವಾಗಲಿದೆ. ಸಿ.ಎನ್.ಜಿ. ವಾಹನಗಳ ಜೊತೆಗೆ 500 ಕ್ಕೂ ಹೆಚ್ಚು ದೇಶೀಯ ಮನೆಗಳು ಮತ್ತು ಐದಾರು ವಾಣಿಜ್ಯ ಸಂಸ್ಥೆಗಳಿಗೆ ಪಿ.ಎನ್.ಜಿ. ಸಂಪರ್ಕಗಳನ್ನು ವಿಸ್ತರಿಸಲಾಗಿದ್ದು, 2040ನೇ ಸಾಲಿನವರೆಗೆ ಶೂನ್ಯ ಹೊರಸೋಸುವಿಕೆಯನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯಕ್ಕೂ ಸಹ ಸೇವೆ ಕಲ್ಪಿಸುವ ಗುರಿಯನ್ನು ಸದರಿ ಕಂಪನಿಯು ಹೊಂದಿರುವುದು ಶ್ಲಾಘನೀಯವಾಗಿದೆ ಎಂದರು.
ಸಾಂಪ್ರದಾಯಿಕ ಎಲ್.ಪಿ.ಜಿ. ಸಿಲಿಂಡರಗಳನ್ನು ಹೋಲಿಸಿದರೆ ವಾಣಿಜ್ಯ ಗ್ರಾಹಕರು ನಿರ್ದಿಷ್ಟವಾಗಿ ಶೇ.40% ವೆಚ್ಚದ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಜೊತೆಗೆ ವರ್ಧಿತ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪಿ.ಎನ್.ಸಿ.ಯನ್ನು ಎಲ್.ಪಿ.ಜಿ., ಪೆಟ್ರೋಲ್, ಡೀಸೆಲ್ ಮತ್ತು ಇತರೆ ಸಾಂಪ್ರದಾಯಿಕ ಇಂಧನಗಳಿಗೆ ಸುರಕ್ಷಿತ ಪರ್ಯಾಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಈ ಯೋಜನೆಯಿಂದ ನಿಯಂತ್ರಿತ ವಿತರಣೆ ಮತ್ತು ಸೋರಿಕೆಯ ಅಪಾಯ ಸಹ ಕಡಿಮೆ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಪಿಸಿಎಲ್ ಕಂಪನಿಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಣೆಗೆ ಸುಸ್ಥಿರ ಇಂಧನದ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಅವರು ಇತ್ತೀಚಿಗೆ ನಗರದ ಶ್ರೀ ಗುರುದ್ವಾರಾ ಶ್ರೀನಾನಕ ಝಿರಾ ಸಾಹೆಬ್ ಲಂಗರನಲ್ಲಿ ಸ್ಥಾಪಿಸಲಾಗಿರುವ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೀದರ ಜಿಲ್ಲೆಯಲ್ಲಿ ಗ್ಯಾಸ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈರ್ಸಗಿಕ ಅನಿಲ ಸಂಪರ್ಕವನ್ನು ಸ್ಥಾಪಿಸಿರುವುದಕ್ಕೆ ಬಿಪಿಸಿಎಲ್ ಕಂಪನಿಯ ಪ್ರಯತ್ನಗಳನ್ನು ಶ್ಲಾಘಿಸಿದರು.


ಗ್ರಾಹಕರ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಲು ಬಿಪಿಸಿಎಲ್ 9901693254 ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಸೇವೆಗಳಿಗೆ ಸಂಬAಧಿಸಿದAತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ.

ಸಿ.ಜಿ.ಡಿ.ಯೋಜನೆಯು ಸ್ವಚ್ಛವಾದ, ವೆಚ್ಚ ಪರಿಣಾಮಕಾರಿ ಮತ್ತು ಸುರಕ್ಷಿತ ಇಂಧನ ಪರಿಹಾರಗಳತ್ತ ಒಂದು ಮಹತ್ತರ ಹೆಜ್ಜೆಯನ್ನಾಗಿ ಪ್ರತಿನಿಧಿಸುತ್ತದೆ, ಇದು ಹಸಿರು ಮತ್ತು ಹೆಚ್ಚು ಶಕ್ತಿ ಸಮರ್ಥ ಭವಿಷ್ಯದ ದೃಷ್ಟಿ ಹೊಂದಲಾಗಿದೆ ಎಂದರು.


ಭಾರತ ಪೆಟ್ರೋಲಿಯಂ ಕಾರ್ಪೊಎ಼ನ್ ಲಿಮಿಟೆಡ್ (ಬಿಪಿಸಿಎಲ್) ನೇತೃತ್ವದಲ್ಲಿ ಸಿಜಿಡಿ ಯೋಜನೆಯು ಬೀದರ ಭೌಗೋಳಿಕ ಪ್ರದೇಶದಲ್ಲಿ ಸಮಗ್ರ ಅನಿಲ ಜಾಲವನ್ನು ಅಭಿವೃದ್ಧಿ ಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಭಾಗವಾಗಿರುತ್ತದೆ. ಈ ಸಂಕುಚಿತ ನೈಸರ್ಗಿಕ ಅನಿಲ ಕೇಂದ್ರಗಳು ಮತ್ತು ಸಿ.ಎನ್.ಜಿ. ಹಾಗೂ ಪಿ.ಎನ್.ಜಿ.ಯನ್ನು ದೇಶೀಯ, ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ತಲುಪಿಸಲು ಸದರಿ ಕಂಪನಿಯು ಗುರಿಯನ್ನಾಗಿಸಿಕೊಂಡಿದೆAದರು.


ಪ್ರಸ್ತುತ ಬೀದರ ಜಿಲ್ಲೆಯ ಆರು ತಾಲ್ಲೂಕುಗಳನ್ನು ಒಳಗೊಂಡು 14 ಸಿ.ಎನ್.ಜಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಿಪಿಸಿಎಲ್ ವತಿಯಿಂದ ಮಾರ್ಚ 2025 ರೊಳಗಾಗಿ ಇನ್ನೂ ಎಂಟು ನಿಲ್ದಾಣಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಿಕೊಂಡಿದೆ.

ಇದರಿಂದಾಗಿ ಆಟೊಮೊಬೈಲ್ ವಲಯದಲ್ಲಿ ಗಮನಾರ್ಹ ಹೆಜ್ಜೆಯಾಗಿದ್ದು ವಾತಾವರಣ ಸಂರಕ್ಷಣೆಯಲ್ಲಿಯೂ ತುಂಬಾ ಅನುಕೂಲವಾಗಲಿದೆ. ಸಿ.ಎನ್.ಜಿ. ವಾಹನಗಳ ಜೊತೆಗೆ 500 ಕ್ಕೂ ಹೆಚ್ಚು ದೇಶೀಯ ಮನೆಗಳು ಮತ್ತು ಐದಾರು ವಾಣಿಜ್ಯ ಸಂಸ್ಥೆಗಳಿಗೆ ಪಿ.ಎನ್.ಜಿ. ಸಂಪರ್ಕಗಳನ್ನು ವಿಸ್ತರಿಸಲಾಗಿದ್ದು, 2040ನೇ ಸಾಲಿನವರೆಗೆ ಶೂನ್ಯ ಹೊರಸೋಸುವಿಕೆಯನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯಕ್ಕೂ ಸಹ ಸೇವೆ ಕಲ್ಪಿಸುವ ಗುರಿಯನ್ನು ಸದರಿ ಕಂಪನಿಯು ಹೊಂದಿರುವುದು ಶ್ಲಾಘನೀಯವಾಗಿದೆ ಎಂದರು.
ಸಾಂಪ್ರದಾಯಿಕ ಎಲ್.ಪಿ.ಜಿ. ಸಿಲಿಂಡರಗಳನ್ನು ಹೋಲಿಸಿದರೆ ವಾಣಿಜ್ಯ ಗ್ರಾಹಕರು ನಿರ್ದಿಷ್ಟವಾಗಿ ಶೇ.40% ವೆಚ್ಚದ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಜೊತೆಗೆ ವರ್ಧಿತ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪಿ.ಎನ್.ಸಿ.ಯನ್ನು ಎಲ್.ಪಿ.ಜಿ., ಪೆಟ್ರೋಲ್, ಡೀಸೆಲ್ ಮತ್ತು ಇತರೆ ಸಾಂಪ್ರದಾಯಿಕ ಇಂಧನಗಳಿಗೆ ಸುರಕ್ಷಿತ ಪರ್ಯಾಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

ಈ ಯೋಜನೆಯಿಂದ ನಿಯಂತ್ರಿತ ವಿತರಣೆ ಮತ್ತು ಸೋರಿಕೆಯ ಅಪಾಯ ಸಹ ಕಡಿಮೆ ಇರುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಬಿಪಿಸಿಎಲ್ ಕಂಪನಿಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!