ಬೀದರ.07.ಫೆಬ್ರುವರಿ.25: ಔರಾದ(ಬಾ) ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಾಂದೇಡ ಬೀದರ ಮುಖ್ಯ ರಸ್ತೆಗೆ ಹೊಂದಿಕೊAಡಿರುವ 02 ಎಕರೆ ಜಮೀನು ರೈತರ ಅನುಕೂಲಕ್ಕಾಗಿ ಹತ್ತಿ ಬೆಳೆಗಾರರ ಮಾರಾಟಕ್ಕಾಗಿ ಮೆ: ಸಾಯಿ ಜಿನ್ನಿಂಗ್ ಮಿಲ್, ಔರಾದ(ಬಾ) ಇವರಿಗೆ ಸಮಿತಿಯು ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಿತ್ತು.
ಆದರೆ ಈವಾಗ ಸದರಿ ಸಂಸ್ಥೆಯವರು ಈ ಜಮೀನಿನಲ್ಲಿ ಅನಧೀಕೃತವಾಗಿ ಲೇ ಔಟ್ ಮಾಡಿ ಬೇರೆಯವರಿಗೆ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ಸಮಿತಿಯ ಗಮನಕ್ಕೆ ಕಂಡು ಬಂದಿರುತ್ತದೆ. ಕಾರಣ ಈ ಮೇಲಿನ ಜಮೀನು ಯಾರೇ ಖರೀದಿಸಿದ್ದಲ್ಲಿ, ವರ್ಗಾವಣೆ ಮಾಡಿದ್ದಲ್ಲಿ, ಅದು ಕಾನೂನು ಬಾಹಿರವಾಗಿರುತ್ತದೆ.
ಇದಕ್ಕೆ ಸಮಿತಿಯು ಜವಾಬ್ದಾರಿಯಾಗಿರುವುದಿಲ್ಲ, ತಾವೇ ಜವಾಬ್ದಾರರಾಗುತ್ತಿರೆಂದು ಔರಾದ (ಬಾ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಜಮೀನು ಹತ್ತಿ ಬೆಳೆದ ರೈತರಿಗೆ ಅನುಕೂಲವಾಗಬಹುದೆಂಬ ದೃಷ್ಟಿಯಿಂದ ಮೆ: ಸಾಯಿ ಜಿನ್ನಿಂಗ್ ಮಿಲ್ ಇವರಿಗೆ ಸಮಿತಿಯು ಹತ್ತಿ ವ್ಯವಹಾರಕ್ಕಾಗಿ ಮಾತ್ರ ಹಂಚಿಕೆ ಮಾಡಿತ್ತು ಸದರಿ ಸಂಸ್ಥೆಯವರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ನಿಯಮಗಳು ಹಾಗೂ ಸಮಿತಿಯು ವಿಧಿಸುವ ಷರತ್ತು ಹಾಗೂ ನಿಬಂಧನೆಗಳನ್ನು ಸ್ಪಷ್ಟವಾಗಿ ಉಲಂಘಿಸಿರುತ್ತಾರೆ.
ಕಾರಣ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರ ಪತ್ರದನ್ವಯ ಸದರಿ 02 ಎಕರೆ ಜಮೀನನ್ನು ನಿಯಮನುಸಾರ ತೆರವುಗೊಳಿಸಲು ತಿಳಿಸಿರುವ ಪ್ರಯುಕ್ತ ಸಮಿತಿಯು ನಿಯಮನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆಂದು ಅವರು ತಿಳಿಸಿದ್ದಾರೆ.