ಬೀದರ.17.ಜನವರಿ.25 ಇಂದು ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ಬೀದರ ಅವರ ಸಹಯೋಗದೊಂದಿಗೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೆಂದ್ರ ಹುಮನಾಬಾದ ( GTTC Humnabad ) ತರಬೇತಿ ಕೇಂದ್ರದಲ್ಲಿ ಬೀದರ ಜಿಲ್ಲೆಯ ಆಯ್ದ ಸ್ವ-ಸಹಾಯ ಗುಂಪುಗಳ ಮಹಿಳಾ ಅಭ್ಯರ್ಥಿಗಳಿಗೆ “ನಲ ಜಲ ಮಿತ್ರ ಯೋಜನೆಯಡಿ” ಕರ್ನಾಟಕ ಕೌಶಲ್ಯ ಅಭಿವೃಧಿ ನಿಗಮ ಬೆಂಗಳೂರು ವತಿಯಿಂದ ಮೊದಲನೆ ತಂಡದ ತರಬೇತಿಯಲ್ಲಿ 47 ಜನ ಮಹಿಳೆಯವರು ನೋಂದಣಿ ಮಾಡಿಕೊಂಡು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮಹಿಳಾ ಅಭ್ಯರ್ಥಿಗಳಿಗೆ ಸಂಸದರಾದ ಸಾಗರ ಖಂಡ್ರೆ ಅವರು 47 ಜನ ಮಹಿಳಾ ಅಭ್ಯರ್ಥಿಗಳಿಗೆ ನಲ ಜಲ ಮಿತ್ರ ಟೂಲ್ ಕೀಟ್ ಹಾಗೂ ಡ್ರೇಸ್ಗಳು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಲೋಕೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.