14/06/2025 12:18 PM

Translate Language

Home » ಲೈವ್ ನ್ಯೂಸ್ » ನಮ್ಮ ಭಾಷೆಯ ಸೊಗಡ ಅಮೂಲ್ಯವಾಗಿದೆ ಸಾಹಿತಿ ಕೋಡಿ ಉಗನೆ ಮಂಜು.

ನಮ್ಮ ಭಾಷೆಯ ಸೊಗಡ ಅಮೂಲ್ಯವಾಗಿದೆ ಸಾಹಿತಿ ಕೋಡಿ ಉಗನೆ ಮಂಜು.

Facebook
X
WhatsApp
Telegram

ಯಳಂದೂರು.13.ಜೂನ್.25:- ಪಟ್ಟಣದ  ಅಂಬೇಡ್ಕರ್ ಭವನದ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿವೃತ್ತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಾಹಿತಿ ಕೋಡಿ ಉಗನೆ ಮಂಜುನಾಥ್ ಪ್ರಸನ್ನ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.

ಚಾಮರಾಜನಗರ ಜಿಲ್ಲೆಯು ಜನಪದಕ್ಕೆ ಹೆಸರುವಾಸಿಯಾಗಿದೆ ಪ್ರಪಂಚದ ಜನಪದ ಸಾಹಿತ್ಯದಲ್ಲಿ ಮಹದೇಶ್ವರರು ಮಂಟೇಸ್ವಾಮಿ, ಬಿಳಿಗಿರಿರಂಗರಂಗಪ್ಪನವರ ಜನಪದ ಕಾವ್ಯ ಮಹತ್ವವನ್ನು ಪಡೆದುಕೊಂಡಿದೆ ಇಂದಿಗೂ ಈ ಭಾಗದಲ್ಲಿ  ಜನಪದ  ಸಾಹಿತ್ಯ ಉಳಿದಿದೆ ಅಂದರೆ ಅದಕ್ಕೆ ಕಾರಣ  ನೀಲಗಾರರು, ದಾಸಪ್ಪನವರು, ದೇವರಗುಡ್ಡರು ಇವರು ಮನೆ ಮನೆಗೆ ತೆರಳಿ ಗಾಯನದ ಮೂಲಕ ಅಥವಾ ಕಥೆಯ ಮೂಲಕ ಮಂಟೇಸ್ವಾಮಿ, ಮಹದೇಶ್ವರರು ಹಾಗೂ ಬಿಳಿಗಿರಿರಂಗಪ್ಪನವರ ತತ್ವಗಳನ್ನು ತಿಳಿಸಿ ಬೆಳಿಸಿದ್ದಾರೆ.

ನಮ್ಮ ಚಾಮರಾಜನಗರ ಭಾಷೆಯ ಸೊಗಡಿಗೆ ರಾಜ್ಯದ ಇತರೆ ಜಿಲ್ಲೆಯ ಜನರು ಮನಸೋತಿದ್ದಾರೆ. ಇಂದಿನ ಯುವಕರು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕಾಗಿದೆ. ಯುವಕರು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಬರಹಗಾರರಾಗಬೇಕು.

ನಾವು ರಚಿಸಿರುವಂತಹ ಬೆಟ್ಟದಬೇಗೆ ಕವನ ಸಂಕಲನ ಆಡುಮಾತಿನ ಶೈಲಿಯಲ್ಲಿ ರಚನೆಯಾಗಿದೆ ಹಳ್ಳಿಯ ನೈಜ ಚಿತ್ರಣ ಅಡಕವಾಗಿದೆ ಪ್ರತಿಯೊಬ್ಬರೂ ಓದಬೇಕಾಗಿದೆ. ಇನ್ನೂ ಅನೇಕ ಪುಸ್ತಕಗಳನ್ನು ಹೊರತರಲಾಗುತ್ತದೆ.

ನಮ್ಮ ಚಾಮರಾಜನಗರ ಜಿಲ್ಲೆಯ ವೈಭವ ಕುರಿತು ಬರೆಯಲಾಗುತ್ತದೆ  ಎಂದರು
ಎಂದರು ಈ ಸಂದರ್ಭದಲ್ಲಿ ಯರಿಯೂರು ರಾಜಣ್ಣ, ಉಪನ್ಯಾಸಕ ಉಮಾಶಂಕರ್, ಕೃಷ್ಣರಾಜ್, ದೊಡ್ಡರಾಜ್, ವಸಂತಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ,  ಮಹದೇವಸ್ವಾಮಿ,ಕುಮಾರ್  ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!