ಬೀದರ.14.ಜೂನ್.25:- ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ ಅವರು ಉಡಿಚಿತ್ ಯೋಜನೆಯಡಿ Dharti Aabajanjatiya Gram Utkarsh Abhiyan “Dharti Aaba Abhiyan-Awareness and Benefit saturation Camps” ಎಂಬ ಅಭಿಯಾನವನ್ನು ಬೀದರ ಜಿಲ್ಲೆಯಲ್ಲಿ ಆಯ್ಕೆಯಾದ 196 ಗ್ರಾಮಗಳಲ್ಲಿ ದಿನಾಂಕ:15-06-2025 ರಿಂದ 30-06-2025 ರವರೆಗೆ ಆಯೋಜಿಸಲು ತಿರ್ಮಾನಿಸಲಾಗಿದ್ದು,
ಈ ಅಭಿಯಾನವು ಬುಡಕಟ್ಟು ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನೆ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವ ಬಗ್ಗೆ ಹಾಗೂ DA-JGUA ಯೋಜನೆಯ ಕುರಿತು ಸಮುದಾಯದವರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ.
ಕಾರಣ ಅಧಿಕಾರಿಗಳು ಈ ಅಭಿಯಾನವನ್ನು ತಾಲೂಕಾ ಮಟ್ಟದಲ್ಲಿ 196 ಗ್ರಾಮಗಳಲ್ಲಿ ದಿನಾಂಕ:15-06-2025 ರಿಂದ 30-06-2025 ರವರೆಗೆ ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬೀದರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.