09/06/2025 11:42 PM

Translate Language

Home » ಲೈವ್ ನ್ಯೂಸ್ » ‘ದಲಿತ’ ಪದ ಬಳಸದಂತೆ ಅದೇಶಿಸುವಂತೆ ಅರ್ಜಿ.ಅರ್ಜಿ ವಜಾ ಹೈಕೋರ್ಟ್!

‘ದಲಿತ’ ಪದ ಬಳಸದಂತೆ ಅದೇಶಿಸುವಂತೆ ಅರ್ಜಿ.ಅರ್ಜಿ ವಜಾ ಹೈಕೋರ್ಟ್!

Facebook
X
WhatsApp
Telegram

ಬೆಂಗಳೂರು.03.ಏಪ್ರಿಲ್.25:- ಸರ್ಕಾರ ಅಧಿಕೃತ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡಬಾರದು ಎಂದು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ.

ಮಹೇಂದ್ರ ಕುಮಾರ ಮಿತ್ರಾ ಸಲ್ಲಿಸಿದ್ದ PIL ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ರಾಜ್ಯ ಸರಕಾರದ ಎಲ್ಲ ಇಲಾಖೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿದಂತೆ ನಡೆಸುವ ತನ್ನ ಅಧಿಕೃತ ವ್ಯವಹಾರದಲ್ಲಿ ದಲಿತ ಪದ ಬಳಸದಂತೆ ಅದೇಶಿಸುವಂತೆ ಅರ್ಜಿ ಸಲ್ಲಿಕೆಯಾಗಿತ್ತು.

SC/ST ವರ್ಗದವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡದಂತೆ ಸೂಚಿಸಿ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದ್ರೆ, ಅದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ದಲಿತ ಪದವನ್ನು ಬಳಕೆ ಮಾಡುವುದು ಅಸಾಂವಿಧಾನಿಕ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು. ಕೇಸ್ ನಲ್ಲಿ ವಾದ ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಅರ್ಜಿ ತಿರಸ್ಕರಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!