09/06/2025 12:30 PM

Translate Language

Home » ಲೈವ್ ನ್ಯೂಸ್ » ತಮ್ಮ ಜನ್ಮದಿನದ ಅಂಗವಾಗಿ ಬ್ಯಾನರ್, ಕಟೌಟ್ ಕಟ್ಟದಂತೆ.ಸಚಿವರು ಈಶ್ವರ ಖಂಡ್ರೆ ಮನವಿ.!

ತಮ್ಮ ಜನ್ಮದಿನದ ಅಂಗವಾಗಿ ಬ್ಯಾನರ್, ಕಟೌಟ್ ಕಟ್ಟದಂತೆ.ಸಚಿವರು ಈಶ್ವರ ಖಂಡ್ರೆ ಮನವಿ.!

Facebook
X
WhatsApp
Telegram


ಬೆಂಗಳೂರು, ಜ.9: ಈ ವರ್ಷ  ಸಾರ್ವಜನಿಕವಾಗಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದಿರಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀರ್ಮಾನಿಸಿದ್ದು, ಯಾರೂ ಬ್ಯಾನರ್, ಕಟೌಟ್ ಕಟ್ಟದಂತೆ ಮನವಿ ಮಾಡಿದ್ದಾರೆ.


ತತ್ಸಂಬಂಧವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗಷ್ಟೇ ತಮ್ಮ ಪುತ್ರ ಸಂಸದರಾದ ಸಾಗರ್  ಖಂಡ್ರೆ ಅವರ ಜನ್ಮ ದಿನವನ್ನು  ಭಾಲ್ಕಿಯ ಜನತೆ ಮತ್ತು ಅಭಿಮಾನಿಗಳೆಲ್ಲಾ ಅದ್ದೂರಿಯಿಂದ ಆಚರಿಸಿದ್ದಾರೆ. ಈಗ ಪ್ರಸಕ್ತ ಸನ್ನಿವೇಶದಲ್ಲಿ ತಮ್ಮ ಜನ್ಮ ದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಿಗಿಲಾಗಿ ಜ.14ರಿಂದ 16ರವರೆಗೆ ತಾವು ಬೀದರ್ ಜಿಲ್ಲೆಯಿಂದ ಹೊರಗೆ ಇರುವುದಾಗಿಯೂ ತಿಳಿಸಿದ್ದು, ಫ್ಲೆಕ್ಸ್, ಬ್ಯಾನರ್ ಕಟ್ಟದಂತೆ ಕಾಂಗ್ರೆಸ್ ಕಾರ್ಯಕರ್ತರು, ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!