19/04/2025 12:28 AM

Translate Language

Home » ಬೀದರ » ಡಿ.17 ರಂದು ಪಿಂಚಣಿ ಅದಾಲತ್ ಆಯೋಜನೆ

ಡಿ.17 ರಂದು ಪಿಂಚಣಿ ಅದಾಲತ್ ಆಯೋಜನೆ

Facebook
X
WhatsApp
Telegram


ಬೀದರ, 05ಡಿಸೆಂಬರ್24 :- ಬೀದರ ಅಂಚೆ ವಿಭಾಗದ ಅಂಚೆ ಇಲಾಖೆ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್‌ನ್ನು ಡಿಸೆಂಬರ್.17 ರಂದು ಅಂಚೆ ಅಧೀಕ್ಷಕರು ಬೀದರ ವಿಭಾಗ ಬೀದರ ಅವರ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಸಲಾಗುತ್ತಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೇವೆಯಿಂದ ನಿವೃತ್ತರಾದ ಅಂಚೆ ನೌಕರರ ಪಿಂಚಣಿ ಮತ್ತುಇತರೆ ನಿವೃತ್ತಿ ಸೌಲಭ್ಯಗಳ ಹಾಗು ಅಂಚೆ ಕುಟುಂಬ ಪಿಂಚಣಿದಾರರ ಅಹವಾಲುಗಳೇನಾದರು ಇದ್ದಲ್ಲಿ ಅವುಗಳನ್ನು ಅದಾಲತ್ತಿನಲ್ಲಿ ಆಲಿಸಲಾಗುವುದು.ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಪಿಂಚಣಿಅದಾಲತ್ತಿನಲ್ಲಿ ಹಾಜರಾಗುವವರಿಗೆಯಾವುದೇತರಹದ ಭತ್ಯೆ ನೀಡಲಾಗುವುದಿಲ್ಲ.

ಅದಾಲತ್‌ನಲ್ಲಿ ಭಾಗವಹಿಸುವ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಅಥವಾ ಮೇಲ್  dobidar.ka@indiapost.gov.in  ಗೆ ದಿನಾಂಕ 16.12.2024 ರೊಳಗಾಗಿ ಕಳುಹಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!