09/06/2025 7:46 PM

Translate Language

Home » ಲೈವ್ ನ್ಯೂಸ್ » ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜಯಂತಿ ಆಚರಣೆ — ಔರಾದ ಪಟ್ಟಣದ ಲೂಂಬಿಣಿ ನಗರದಲ್ಲಿ ವೈಭವ

ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜಯಂತಿ ಆಚರಣೆ — ಔರಾದ ಪಟ್ಟಣದ ಲೂಂಬಿಣಿ ನಗರದಲ್ಲಿ ವೈಭವ

Facebook
X
WhatsApp
Telegram

ಔರಾದ್.27.ಏಪ್ರಿಲ್.25:- ಇಂದು ಔರಾದ್ ನಗರದ ಲಿಮಂಬುನಿ ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನದ ನಿಮಿತ್ತ ಔರಾದ ಪಟ್ಟಣದ ಲೂಂಬಿಣಿ ನಗರದಲ್ಲಿ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಪೂಜ್ಯ ಭಂತೆ ಧಮ್ಮನಂದ ಜೀ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತೋಷ ಮೊಹಿತೆ ವಹಿಸಿದ್ದರು. ಉದ್ಘಾಟನೆಯ ಕಾರ್ಯವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರುಬಾಯಿ ಘುಳೆ ನೆರವೇರಿಸಿದರು.

ಮುಖ್ಯ ಭಾಷಣಕಾರರಾಗಿ ಉದಗೀರದ ವಿಧ್ಯಾಸಾಗರ ಡೋಣರನಳೆ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡರಾದ ಬಾಬುರಾವ ತಾರೆ, NSYF ರಾಜ್ಯ ಸಂಚಾಲಕರಾದ ಶಿವಕುಮಾರ ಕಾಂಬಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಂಡರಿ ಆಡೆ, ಪ.ಜಾ.ಪ.ಪಂ. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ರಾಜಕುಮಾರ ಡೋಗಂರೆ, ಪ.ಜಾ.ಪ.ಪಂ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸಂಜುಕುಮಾರ ಡೋಂಗರೆ, ಭಾರತೀಯ ಬೌದ್ಧ ಮಹಾಸಭೆಯ ಅಧ್ಯಕ್ಷರಾದ ಸೊಪಾನರಾವ ಡೋಂಗರೆ,  ಮತ್ತು ದಲಿತ ಮುಖಂಡರಾದ ದಯಾಸಾಗರ ಭೆಂಡೆ ಉಪಸ್ಥಿತರಿದ್ದರು.

ಇದೇ ರೀತಿ ಲಕ್ಷ್ಮಣ್ ತೂರೆ, ರಾಹುಲ್ ಕಾಂಬಳೆ, ಶಿವಕುಮಾರ ಸಾಮ್ರಾಟ್, ಶಿವಾಜಿ ಶಿಂದೆ, ದತ್ತು ಡೋಂಗರೆ ಸೇರಿದಂತೆ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯಕ್ರಮವನ್ನು ತುಳಸಿರಾಮ ಬೇಂದ್ರೆ ಉತ್ತಮವಾಗಿ ನಿರೂಪಿಸಿದರು. ಮಹಾರಾಷ್ಟ್ರದಿಂದ ಆಗಮಿಸಿದ ಮಚೇಂದ್ರ ಕಾಂಬಳೆ ಅವರು ಭೀಮ ಗೀತೆಗಳ ಸೊಗಸಾದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!