ಚಾಮರಾಜನಗರ.20.ಏಪ್ರಿಲ್.25:- ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರೌಡಶಾಲೆಯ ಆವರಣದಲ್ಲಿ ಭಾನುವಾರ. ಕೆಸ್ತೂರು ಯೂತ್ ಕಬಡ್ಡಿ ಅಸೋಸಿಯೇಶನ್ ವತಿಯಿಂದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಆಹ್ವಾನಿತ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಜಿಲ್ಲೆಯಾದ್ಯಂತ ಒಟ್ಟು 16 ತಂಡಗಳು ಭಾಗವಹಿಸಿದವು.
ಫೈನಲ್ ಪಂದ್ಯದಲ್ಲಿ ಕೆಸ್ತೂರು ತಂಡವು ಪ್ರಥಮ ಸ್ಥಾನವನ್ನು ಪಡೆದರೆ.

ದ್ವಿತೀಯ ಸ್ಥಾನವನ್ನು ಶಿವಪುರ ತಂಡವು ಪಡೆಯಿತು.ಪ್ರಥಮ ಸ್ಥಾನ 10000 ನಗದು ಬಹುಮಾನವಾಗಿದೆ.
ಟ್ರೋಫಿಯನ್ನು ಕಾಂಗ್ರೇಸ್ ಮುಖಂಡರ ಕಂದಹಳ್ಳಿ ನಂಜುಂಡಸ್ವಾಮಿ ವಿತರಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಕ್ರೀಡೆಗೆ ತನ್ನದೆಯಾದ ಮಹತ್ವವನ್ನು ನೀಡಲಾಗಿದೆ.
ಪ್ರತಿಯೊಬ್ಬರೂ ಮಾನಸಿಕವಾಗಿ, ದೈಹಿಕವಾಗಿ ಸದೃಢತೆಯಿಂದರಬೇಕಾದರೆ ಕ್ರೀಡೆಗಳು ಅವಶ್ಯಕವಾಗಿದೆ. ಭಾರತದಲ್ಲಿ ಅತೀ ಹೆಚ್ಚು ಯುವಶಕ್ತಿ ಬಳಗವಿದೆ ಇದನ್ನು ಪರಿಪೂರ್ಣ ಬಳಸಿಕೊಂಡರೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು. ಗ್ರಾಮೀಣರ ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಬೇಕು ಅಂತಹ ಕಾರ್ಯವನ್ನು ಈ ನಮ್ಮಕೆಸ್ತೂರು ಕಬಡ್ಡಿ ಅಸೋಸಿಯೇಷನ್ ನಡೆಸಿಕೊಂಡು ಬರುತ್ತದೆ ಎಂದರು.ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಡಿ ಎನ್ ನಾಗರಾಜು, ರಾಜು,
.ಆಯೋಜಕರು ಹಾಗೂ ಕೋಚ್ ಮಾದೇಶ್.ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಸಿದ್ದಶೆಟ್ಟಿ, ಸಿದ್ದಪ್ಪಸ್ವಾಮಿ, ರೇಣು, ರಂಗರಾಜು( ಪಿಂಕು),ಚಂದ್ರಶೇಖರ್, ಶ್ರೀನಿವಾಸ್ ಹಾಗೂ ಆಟಗಾರರು ಹಾಜರಿದ್ದರು
ವರದಿ ಪ್ರಸನ್ನಕುಮಾರ್ ಕೆಸ್ತೂರು

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಡಿ ಎನ್ ನಾಗರಾಜು, ರಾಜು,
ಆಯೋಜಕರು ಹಾಗೂ ಕೋಚ್ ಮಾದೇಶ್.ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಸಿದ್ದಶೆಟ್ಟಿ, ಸಿದ್ದಪ್ಪಸ್ವಾಮಿ, ರೇಣು, ರಂಗರಾಜು( ಪಿಂಕು),ಚಂದ್ರಶೇಖರ್, ಶ್ರೀನಿವಾಸ್ ಹಾಗೂ ಆಟಗಾರರು ಹಾಜರಿದ್ದರು
ವರದಿ ಪ್ರಸನ್ನಕುಮಾರ್ ಕೆಸ್ತೂರು
ವರದಿಗಾರ: ಜಿ. ಪ್ರಸನ್ನಕುಮಾರ್ ಕೆಸ್ತೂರು