ಬೀದರ.10.ಮಾರ್ಚ.25:- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಸೋಲು ಕಾಣದೆ ಸತತವಾಗಿ ಗೆಲುವಿನ ನಗೆ ಬೀರಿದ್ದ ನಮ್ಮ ತಂಡ ಇಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ಚ್ಯಾಂಪಿಯನ್ಸ್ ಪಟ್ಟ ತನ್ನದಾಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ದೇಶದ ಗೆಲುವಿಗಾಗಿ ಶ್ರಮಿಸಿ ಟ್ರೋಫಿ ಎತ್ತಿದ ನಮ್ಮ ತಂಡದ ಸರ್ವರಿಗೂ ಅಭಿನಂದನೆಗಳು. ನಿಮ್ಮ ಗೆಲುವು ನಿಮ್ಮ ಗೆಲುವು ಮಾತ್ರವಲ್ಲ ರಾಷ್ಟ್ರದ ಗೆಲುವಾಗಿದೆ.
ನಾನು ಕ್ರಿಕೆಟ್ ಆಟಗಾರನಾಗಬೇಕು. ಕ್ರಿಕೆಟ್ ನಲ್ಲಿ ಏನಾದ್ರು ಸಾಧಿಸಬೇಕು ಎಂಬ ಕನಸು ಕಟ್ಟಿಕೊಂಡು ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡಿರುವ ಯುವ ಸಮುದಾಯಕ್ಕೆ ಈ ಗೆಲುವು ಪ್ರೋತ್ಸಾಹ ನೀಡಲಿದೆ.
ಗೆಲುವಿನ ನಗೆ ಬೀರಿ ಚ್ಯಾಂಪಿಯನ್ಸ್ ಪಟ್ಟ ಗಿಟ್ಟಿಸಿಕೊಂಡ ನಮ್ಮ ತಂಡದ ಆಟಗಾರರಿಗೂ, ಸದಾಕಾಲವೂ ಅವರಿಗೆ ಸಲಹೆ ಸೂಚನೆ ನೀಡಿ ಪ್ರೋತ್ಸಾಹಿಸಿದ ತಂಡದ ಕೋಚಿಂಗ್ ಟೀಮ್ ಗೂ ಹಾಗೂ ಟೀಮ್ ಇಂಡಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮತ್ತೊಮ್ಮೆ ಟೀಮ್ ಇಂಡಿಯಾಗೆ ಅಭಿನಂಧನೆಗಳು.
*ಶ್ರೀ ಬಂಡೆಪ್ಪ ಖಾಶೆಂಪುರ್*
ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು