16/06/2025 5:55 AM

Translate Language

Home » ಲೈವ್ ನ್ಯೂಸ್ » ಜಿಲ್ಲೆಯ ಎಲ್ಲಾ ಬೇಕರಿ ಮಾಲೀಕರಿಗೆ ಕೃತಕ ಬಣ್ಣವನ್ನು ನಿಯಮದ ಮಿತಿಯಲ್ಲಿ ಬಳಸಬೇಕೆಂದು ಸಲಹೆ.

ಜಿಲ್ಲೆಯ ಎಲ್ಲಾ ಬೇಕರಿ ಮಾಲೀಕರಿಗೆ ಕೃತಕ ಬಣ್ಣವನ್ನು ನಿಯಮದ ಮಿತಿಯಲ್ಲಿ ಬಳಸಬೇಕೆಂದು ಸಲಹೆ.

Facebook
X
WhatsApp
Telegram

21.ಡಿ. ಇಂದು ಆಹಾರ ಪದಾರ್ಥಗಳು ಮಾರಾಟ ಮಾಡುವರು ಮತ್ತು ಆಹಾರ ಪದಾರ್ಥಗಳು ಮಾರಾಟಗಾರರು ಎಲ್ಲರಿಗೂ ನೋಂದಾನೆ ಮತ್ತು ಪರವಾನಗಿ ಕಡ್ಡಾಯವಾಗಿರುತ್ತದೆ.

ಬೀದರ ನಗರದ ಎಲ್ಲಾ ಆಹಾರ ಪದಾರ್ಥಗಳ ತಯಾರಕರು ಹಾಗೂ ಇತರೆ ಆಹಾರ ಪದಾರ್ಥಗಳ ಮಾರಾಟಗಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಹಾಗೂ ಪರವಾನಿಗೆ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಡಿಸೆಂಬರ್ ತಿಂಗಳಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಸಾರ್ವಜನಿಕರು ಹೆಚ್ಚಾಗಿ ಕೇಕ್ ತೆಗೆದುಕೊಳ್ಳುತ್ತಾರೆ, ಕಾರಣ ಜಿಲ್ಲೆಯ ಎಲ್ಲಾ ಬೇಕರಿ ಮಾಲೀಕರಿಗೆ ಕೃತಕ ಬಣ್ಣವನ್ನು ನಿಯಮದ ಮಿತಿಯಲ್ಲಿ ಬಳಸಬೇಕೆಂದು ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.ಸಂತೋಷ ಸೂಚಿಸಿದರು.


ಅವರು ಇತ್ತೀಚಿಗೆ ಬೀದಿ ಬದಿ ವ್ಯಾಪಾರಿಗಳು, ಟೀ ಅಂಗಡಿಗಳು, ಬೇಕರಿ, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಚಾರ್ಟ ಭಂಡಾರ್‍ಗಳ ವಿಶೇಷ ನೋಂದಣಿ ಮತ್ತು  ಪರವಾನಿಗೆ ಆಂದೋಲನ್ ಬಗ್ಗೆ ಹುಮನಾಬಾದ ಆರ್ಯ ಸಮಾಜದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.


ಬೀದಿ ಬದಿ ವ್ಯಾಪಾರಿಗಳು  ಯಾವುದೇ ತರಹದ ಕೃತಕ ಪರ್ದಾಥಗಳನ್ನು, ಟೆಸ್ಟಿಂಗ್ ಪೌಡರಗಳ, ಪಾನಿಪೋರಿ ನೀರಿನಲ್ಲಿ ಸಿಟ್ರಸ್ ಹಾಗೂ ಬಾಳೆ ಹಣ್ಣುಗಳನ್ನು ರೈಪನಿಂಗ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು ಹಾಗೂ ಒಂದು ವೇಳೆ ಕೃತಕ ಬಣ್ಣ ಉಪೋಗಿಸಿದ ಪಕ್ಷದಲ್ಲಿ ತಮ್ಮ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.


ಈ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರು ಸುಭಾóಷ ಅಷ್ಟಿಕರ್,  ಆರ್ಯ ಸಮಾಜದ ಅಧ್ಯಕ್ಷ ನಾರಾಯಣ ಚಿದ್ರಿ ಹಾಗೂ ಕಾರ್ಯಕ್ರಮ ಸಂಚಾಲನೆ ಬೀದರ ತಾಲ್ಲೂಕಾ ಆಹಾರ ಸುರಕ್ಷತಾ ಅಧಿಕಾರಿ ಮನೋಹರ ಅಲಶೆಟ್ಟಿ, ನಿರೂಪಣೆ ಹುಮನಾಬಾದ ತಾಲ್ಲೂಕಾ ಆಹಾರ ಸುರಕ್ಷತಾಧಿಕಾರಿ ರಾಜ ರೆಡ್ಡಿ ಹಾಗೂ ವ್ಯಾಪಾರಿಗಳಾದ ರಾಜಕುಮಾರ,  ಆಶಿಫ್, ಗುಂಡಾರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಲ್ಲಾ ಬಿದಿವ್ಯಾಪರಿಗಳಿಗೆ ಸರ್ಕಾರ ಇಲಾಖೆ ಪಾರ್ವಾಗಿ ಇಂದು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಗಾರದಲ್ಲಿ ಬೀದರ್ ನಗರ ಹಾಗೂ ಜಿಲ್ಲಾದ್ಯಂತ ಎಲ್ಲಾ ಬೀದಿ ವ್ಯಾಪಾರಿಗಳು ಭಾಗ ವಹಿಸಿದ್ರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!