ಬೀದರ.25.ಜನೆವರಿ.25:- ಬೀದರ್ ಜಿಲ್ಲೆಯಲ್ಲಿ ವಾಹನಗಳ ಮೇಲೆ ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕ ಸಂಘದ ನಿಯೋಗ ಮನವಿ ಮಾಡಿದೆ.
ಇಂದು ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ವಾಹನಗಳ ಮೇಲೆ ಪ್ರೆಸ್ ಪದ ಅತಿ ಹೆಚ್ಚಾಗಿ ದುರ್ಬಳಕೆ ಆಗುತ್ತಿದೆ.
ಇದರಿಂದಾಗಿ ಪತ್ರಕರ್ತರಿಗೆ ಅನೇಕ ಸಲ ಮುಜುಗರ ಉಂಟಾಗಿದೆ ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಕರ್ತರಲ್ಲದವರು ಸಹ ದ್ವಿಚಕ್ರ ಹಾಗೂ ಕಾರು ಸೇರಿದಂತೆ ಇತರ ವಾಹನಗಳ ಮೇಲೆ ಪ್ರೆಸ್ ಪದ ಬಳಸುತ್ತಿರುವುದು ಕಂಡು ಬಂದಿದೆ. ಅನೇಕ ಸಲ ಪೊಲೀಸರಿಗೂ ಸಹ ನಿಜವಾದ ಪತ್ರಕರ್ತರ ಬಗ್ಗೆ ತಿಳಿಯದೇ ಕ್ರಮ ಜರುಗಿಸುವುದರ ಬಗ್ಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪತ್ರಕರ್ತರಿದ್ದವರನ್ನು ಮಾತ್ರ ಗುರುತು ಮಾಡಿ ಉಳಿದಂತಹ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಪೋಲಿಸ್ ವರಿಷ್ಠಾಧಿಕಾರಿ, 2 ರಿಂದ 3 ದಿನದಲ್ಲಿ ಪತ್ರಕರ್ತರ ವಾಹನಗಳಿಗೆ ಪೊಲೀಸ್ ಕಾರ್ಡ್ ವಿತರಣೆ ಮಾಡಲಾಗುವುದು ಮತ್ತು ಪತ್ರಕರ್ತರಲ್ಲದವರ ವಾಹನಗಳು ತಪಾಸಣೆ ಮಾಡಿ ದಂಡ ವಿಧಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ಸಂಪಾದಕರ ಸಂಘ ನಿಯೋಗದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಹಿರಿಯ ಪತ್ರಕರ್ತ ಸೈಯದ್ ಹಸನ್ ಖಾದ್ರಿ, ಅಬ್ದುಲ್ ಅಲಿ, ಪ್ರದೀಪ್ ಬಿರಾದಾರ್,ನಂದಕುಮಾರ್, ಸುನೀಲ್ ಕುಲಕರ್ಣಿ, ಸ್ವಾಮಿದಾಸ್ ಯೇಸುದಾಸ್ ನಾಗೂರೆ, ಜೈಕುಮಾರ್ ಹಾಗೂ ಸುಧಾರಾಣಿ ಸೇರಿದಂತೆ ಹಲವರು ಹಾಜರಿದ್ದರು.
ಈ ಜಾಲಿ ಪತ್ರಕರ್ತರಿಗೆ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪತ್ರಕರ್ತಾ ಸಂಘದವರು ಮನವಿ ಮಾಡಿದರು