07/08/2025 2:21 PM

Translate Language

Home » ಲೈವ್ ನ್ಯೂಸ್ » ಜಾರ ಲಂಬಾಣಿ ಸಮಾಜಕ್ಕೆ ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ

ಜಾರ ಲಂಬಾಣಿ  ಸಮಾಜಕ್ಕೆ  ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ

Facebook
X
WhatsApp
Telegram


ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ  ಸಮಾಜಕ್ಕೆ  ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ ಎಂದು  ಕೇಂದ್ರಕ್ಕೆ ಶ್ರೀಫಾರಸ್ಸು  ಮಾಡಿ ಒತ್ತಾಯಿಸಿತ್ತು ಅದರಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ ವರದಿಯಂತೆ ಶೇ೬% ರಷ್ಟು ಒಳಮೀಸಲಾತಿ ಕಲ್ಪಿಸಬೇಕೆಂದು  ಬೀದರ ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಬಸವರಾಜ ಪವಾರ ವಕೀಲರು  ಪತ್ರಿಕಾ ಹೇಳಿಕೆ ನೀಡಿದ್ದಾರೆ.


ಆಯೋಗದ ವರದಿಯಂತೆ ಲಂಬಾಣಿ ,ಭೋವಿ, ಕೋರವ ಮತ್ತು ಕೊರಚ ಸಮುದಾಯಗಳಿಗೆ ನ್ಯಾಯಯುತವಾಗಿರುವಂತೆ  ಶೇ೬% ರಷ್ಟಿ ಮೀಸಲಾತಿ ನೀಡಬೇಕು.೧೫೦ ಕೋಟಿ ರೂ.ವೆಚ್ಚದಲ್ಲಿ  ಏಕ ಸದಸ್ಯ ಆಯೋಗವು ೧೦೧ ಪರಿಶಿಷ್ಟ ಜಾತಿಗಳ ಅಧ್ಯಾಯನ ನಡೆಸಿ  ಒಳ ಮೀಸಲಾತಿ ದೊರಕುವಂತೆ  ಆಯೋಗವು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ.


ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು  ಈ ೪ ಸಮುದಾಯಗಳಿಗೆ  ಶೇ ೧೫ರಿಂದ ಶೇ೧೭ ರಷ್ಟು  ಒಳ ಮೀಸಲಾತಿ ನೀಡಬೇಕೆಂದು ಶೀಪಾರಸ್ಸು ಮಾಡಿತು ಆದರೆ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಆದ್ಯತೆ ನೀಡುವಂತೆ ಕಾಣುತ್ತಿಲ್ಲ. ಎತನ ಮಧ್ಯೆ  ಪರಿಶಿಷ್ಟ ಜಾತಿಗಳಾದ ಎಡ ಮತ್ತು ಬಲ ಗಳಿಗೆ ಸಮಾನ ಮೀಸಲಾತಿ ನೀಡಿ  ಈ ೪ ಸಮುದಾಯಗಳಿಗೆ  ಅನ್ಯಾಯ ಮಾಡುವ ಹುನ್ನಾರ ಮತ್ತು ಕೆಲ ಕಾಂಗ್ರೇಸ್ ಸರ್ಕಾರವು ಸಚಿವರ  ರಹಸ್ಯ ಸಭೆಗಳು  ನಡೆದಿವೆ ಎಂದು ತಿಳಿದು ಬಂದಿದೆ.
ಹೀಗಾದಲ್ಲಿ ಬಂಜಾರ ,ಭೋವಿ, ಕೋರವ ಮತ್ತು ಕೊರಚ  ಪರಿಶಿಷ್ಟ ಜಾತಿಗಳಿಗೆ  ತೀವ್ರ ಅನ್ಯಾಯವಾಗಬಹುದಾಗಿದೆ. 

ಈ ೪ ಸಮುದಾಯಗಳು  ಅತ್ಯಂತ ಬಡತನ ರೇಖೆಗಿಂತಾಗಿದ್ದು  ಆರ್ಥಿಕವಾಗಿ ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಹಿಂದುಳಿದಿರುತ್ತವೆ. ಬದುಕಲು  ಬಲು ಕಷ್ಟ ಪಡುತ್ತಿರುವ ಈ ಸಮುದಾಯಗಳಿಗೆ ಸರ್ವಾಂಗೀಣ ಪ್ರಗತಿಗಾಗಿ ಶೇ೬%ರಷ್ಟು ಮೀಸಲಾತಿಯನ್ನು  ಕೊಡಬೇಕೆಂದು ಬಸವರಾಜ ಪವಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD