11/06/2025 7:45 AM

Translate Language

Home » ಲೈವ್ ನ್ಯೂಸ್ » ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ-ಸಚಿವ ಈಶ್ವರ ಖಂಡ್ರೆ

ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ-ಸಚಿವ ಈಶ್ವರ ಖಂಡ್ರೆ

Facebook
X
WhatsApp
Telegram

ಬೀದರ.15.ಮಾರ್ಚ.25:-ಜಾನಪದ ಕಲೆ ಅತೀ ಪ್ರಾಚೀನವಾದದ್ದು, ಮಾನವನ ಸಂಸ್ಕೃತಿ, ಪರಂಪರೆಯೊoದಿಗೆ ಹಾಸು ಹೊಕ್ಕಾಗಿದೆ. ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆಯೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ರಂಗಮAದಿರದಲ್ಲಿAದು ಹಮ್ಮಿಕೊಂಡ 2023-2024ನೇ ಸಾಲಿನ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಬೆಂಗಳೂರಿನಿAದ ನೇರವಾಗಿ ವಿತರಣಾ ಸಮಾರಂಭದಲ್ಲಿ ಮೊಬೈಲ್ ಮುಖಾಂತರ ಸಂದೇಶ ನೀಡಿದರು.

ಕರ್ನಾಟಕವು ಜಾನಪದದ ತವರಾಗಿದೆ. ಎಲ್ಲ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ತಾಯಿಬೇರು ಜಾನಪದ. ಮನುಷ್ಯನ ಎಲ್ಲ ಹಂತಗಳಲ್ಲಿ ಜನಮಾನಸದಲ್ಲಿ ಜಾನಪದ ಹಾಸುಹೊಕ್ಕಾಗಿದೆ.

ಮನುಷ್ಯ ಅಧುನಿಕತೆಗೆ ಎಷ್ಟೇ ಒಗ್ಗಿಕೊಂಡರು ಜಾನಪದ ಅತೀ ಮಹತ್ವದ ಕ್ಷೇತ್ರವಾಗಿದೆ. ಯಾವುದೇ ಜಾತಿ ಮತ ಧರ್ಮಕ್ಕೆ ಸೀಮಿತವಾಗದೇ ಜಾನಪದವು ಈಗಲೂ ಉಳಿದುಕೊಂಡಿದ್ದು ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆಯೆಂದರು.

ಕಲ್ಯಾಣ ಕರ್ನಾಟಕದ ಎಲ್ಲ ಜಾನಪದ ಸಾಹಿತಿ ಕಲಾವಿದರ ಕಾರ್ಯಕ್ರಮಕ್ಕೆ ಕೆಕೆಆರ್‌ಡಿಬಿ ಯಿಂದ ಅನುದಾನ ನೀಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಒಣಕೆಯ ಮೂಲಕ ಭತ್ತ ಕುಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜೀವ ವಿಕಾಸದಲ್ಲಿ ಜಾನಪದ ಪ್ರಮುಖ ಪಾತ್ರ ವಹಿಸುತ್ತದೆ. ಅಮ್ಮನ ಲಾಲಿ ಹಾಡಿನಿಂದ ಮನುಷ್ಯ ಮಣ್ಣಾಗುವ ತನಕ ಜಾನಪದಯಿದೆ. ನೈತಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಜಾನಪದ ನೈತಿಕತೆಯು ಅಸ್ತçವಾಗಿದೆಯೆಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಜಾನಪದ ಅಕಾಡೆಮಿ ಸದಸ್ಯರಾದ ವಿಜಯುಕುಮಾರ ಸೋನಾರೆ, ಹಲತುಂಬಿ ಮೂರ್ತಿ, ಮಂಜುನಾಥ ರಾಮಣ್ಣ, ಮೆಹಬೂಬ ಕಿಲ್ಲೇದಾರ, ಶಿವಮೂರ್ತಿ ಭೀಮಬಾಯಿ, ಡಾ.ನಿಂಗಪ್ಪ ಮುದೆನೂರ ಸೇರಿದಂತೆ ಇನ್ನಿತರ ಅಕಾಡೆಮಿ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ ಲೆಕ್ಕಾಧಿಕಾರಿ ಸುರೇಶ ನಾಯ್ಕ, ಶ್ರೀಮತಿ ಎನ್.ನಮ್ರತಾ ಸೇರಿದಂತೆ ಇನ್ನಿತರ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಬಸವರಾಜ ಧನ್ನೂರ, ಪರ್ನಾಡಿಂಸ್ ಹಿಪ್ಪಳಗಾಂವ, ಗೀತಾ ರೆಡ್ಡಿ, ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ, ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ ಸುರೇಶ ಚನ್ನಶೆಟ್ಟಿ, ಸಿದ್ರಾಮಪ್ಪ ಮಾಸಿಮಾಡ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಬಿ.ಪಿ.ಪರಮೇಶ್ವರಪ್ಪ (ಭಜನೆ), ಸಿದ್ದರಾಜು ಆರ್. (ತಂಬೂರಿ ಪದ), ಜಯಂತಿ (ಪಾಡ್ದನ), ಎನ್.ಗಣೇಶ ಗಂಗೊಳ್ಳಿ (ಜಾನಪದ ಗಾಯನ), ಎಸ್.ಆರ್.ಸರೋಜ (ಬುಡಕಟ್ಟು ಕೋಲಾಟ), ಕಮಲಾ ಮರಗನ್ನವರ (ಚೌಡಿಕೆ ಪದ), ಪ್ರಭು ಬಸಪ್ಪ ಕುಂದರಗಿ (ಜಾನಪದ ಸಂಗೀತ), ಸೋಮಣ್ಣ ದುಂಡಪ್ಪ ಧನಗೊಂಡ (ಡೊಳ್ಳು ಕುಣಿತ), ಗಂಗಪ್ಪ ಮ. ಕರಡಿ (ಕರಡಿ ಮಜಲು), ಗಣಪು ಬಡವಾ ಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಗಿರಿಜವ್ವ ಹನುಮಪ್ಪ ಬಣಕಾರ (ಸೋಬಾನೆ ಪದ), ಡಾ.ಗೋವಿಂದಪ್ಪ ರಾಮಚಮದ್ರಪ್ಪ (ಹಗಲುವೇಷ), ಬೋರಮ್ಮ (ತತ್ವಪದ ಗಾಯನ), ಮಾರುತಿ ಕೋಳಿ (ಜಾನಪದ ಗಾಯನ), ಯಲ್ಲಮ್ಮ (ತತ್ವಪದ), ಹೆಚ್.ಚಂದ್ರಶೇಖರ ಹಡಪದ (ಭಜನೆ). ಕೆ.ಶಂಕರಪ್ಪ (ಹಗಲುವೇಷ), ಗೋಪಣ್ಣ (ತತ್ವಪದ/ಭಜನೆ).

2024ನೇ ಸಾಲಿನ ತಜ್ಞ ಪ್ರಶಸ್ತಿ ಪುರಸ್ಕೃತರು: ಡಾ.ಮೈಲಹಳ್ಳಿ ರೇವಣ್ಣ (ಡಾ.ಜೀ.ಶಂ.ಪ.ತಜ್ಞ ಪ್ರಶಸ್ತಿ), ಡಾ.ವೆಂಕಟೇಶ ಇಂದ್ವಾಡಿ (ಡಾ.ಬಿ.ಎಸ್.ಗದ್ದಗಿಮಠ ತಜ್ಞ ಪ್ರಶಸ್ತಿ).

ಪುಸ್ತಕ ಬಹುಮಾನ ವಿಜೇತರು: ಬಿ.ಎಸ್.ಸ್ವಾಮಿ

(2022 ಪ್ರಕಾರ: ಸಂಕೀರ್ಣ ಪುಸ್ತಕದ ಹೆಸರು: ಜಾನಪದ ಲೇಖನ ಗುಚ್ಚ ಬೆಂಗಳೂರು), ಡಾ.ಕುರುವ ಬಸವರಾಜು

(2022 ಪ್ರಕಾರ: ಗದ್ಯ ಪುಸ್ತಕ ಹೆಸರು: ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತು ಲೇಖನಗಳು), ಡಾ.ನಾಗ ಹೆಚ್.ಹುಬ್ಬಿ

(2022 ಪ್ರಕಾರ: ಸಂಶೋಧನೆ ಪುಸ್ತಕ ಹೆಸರು: ಆದಿವಾಸಿ ಸಂಸ್ಕೃತಿಕ ಬೆಂಗಳೂರು), ವ.ನಂ.ಶಿವರಾಮು

(2023 ಪ್ರಕಾರ: ಸಂಶೋಧನೆ ಪುಸ್ತಕದ ಹೆಸರು: ಜನಪದ ಜಾನಪದ ಮತ್ತು ಕ್ಷೇತ್ರ ಕಾರ್ಯ ಮೈಸೂರು), ಡಾ.ವಿಜಯಶ್ರೀ ಸಬರದ

(2023 ಪ್ರಕಾರ: ಸಂಕೀರ್ಣ ಪುಸ್ತಕದ ಹೆಸರು: ಸಬರದ ಮತ್ತು ಜಾನಪದ ಬೆಂಗಳೂರು).

2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಅಕ್ಕಮ್ಮ (ಸಂಪ್ರದಾಯ ಪದ), ಏಸಪ್ಪ ಗುಂಡಪ್ಪ (ಶಹನಾಯಿ ವಾದನ), ಶಾಂತಮ್ಮ ಜಂಬಣ್ಣ (ಬರ‍್ರಕಥೆ), ರೇವಣಪ್ಪ ನಿಂಗಪ್ಪ (ಡೊಳ್ಳಿನ ಹಾಡು ಮತ್ತು ಕುಣಿತ), ಡಾ.ರಾಮು ಮೂಲಿ (ಹಂತಿ ಪದ), ಅಮರಯ್ಯ ಸ್ವಾಮಿ (ಭಜನೆ), ಡಾ.ಕೆ.ಚಿನ್ನಪ್ಪಗೌಡ (ತಜ್ಞ ಪ್ರಶಸ್ತಿ ಪುರಸ್ಕೃತರು), ಡಾ.ಮಂಜುನಾಥ ಬೇವಿನಕಟ್ಟಿ (ತಜ್ಞ ಪ್ರಶಸ್ತಿ ಪುರಸ್ಕೃತರು),

2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಡಾ.ಜೋಗಿಲ ಸಿದ್ಧರಾಜು (ಜಾನಪದ ಗಾಯನ), ಸಿದ್ದಯ್ಯ ಸಿ.ಎಚ್. (ತತ್ವಪದ ಮತ್ತು ಗೀಗೀಪದ), ಎಂ.ಮಹೇಶ (ಡೊಳ್ಳು ಕುಣಿತ), (ಸುನಂದಮ್ಮ (ಕೋಲಾಟ), ವೆಂಕಟರಮಣಪ್ಪ (ಅರೆವಾದ್ಯ ತಮಟೆ), ಸಿದ್ದಪ್ಪ (ಕಿನ್ನರಿ ಜೋಗಿ), ಮಾರ್ತಾಂಡಪ್ಪ (ಭಜನೆ), ಎ.ಶ್ರೀನಿವಾಸ (ಹಗಲುವೇಷ), ಗೌರಮ್ಮ (ಹಸೆ ಚಿತ್ತಾರ), ಸಿ.ಮಂಜುನಾಥ (ನಗಾರಿ ವಾದನ), ಹುರುಗಲವಾಡಿ ರಾಮಯ್ಯ (ಜಾನಪದ ಗಾಯನ0, ಬಿ.ಟಿ.ಮಾನವ (ಕೋಲಾಟ ಸಂಘನಟ), ಕೆ.ಎಂ.ರಾಮಯ್ಯ (ಏಕತಾರಿ ತಂಬೂರಿ ಪದ), ಓಬಮ್ಮ ವೆಂಕಟೇಶ (ಸೋಬಾನೆ ಪದ), ರಂಗಯ್ಯ (ಪಟ ಕುಣಿತ), ತೋಪಣ್ಣ (ಕೀಲು ಕುದರೆ ಕುಣಿತ), ದೊಡ್ಡ ಕೂರ್ಲಪ್ಪ (ತಮಟೆ ವಾದನ), ಕದರಮ್ಮ (ಜಾನಪದ ಹಾಡುಗಾರ್ತಿ), ಕಾಟಮ್ಮ (ಕಥನ ಕಾವ್ಯ), ಸಿರಿಯಮ್ಮ (ಮಹಾಕಾವ್ಯ), ಟೀಕಪ್ಪ ಕಣ್ಣೂರ (ಡೊಳ್ಳು ಕುಣಿತ), ದೇವಕಿ ಕೆ.ಸಿ. (ಊರ್ಟಿಕೋಟ್ ಆಟ), ಗುರುಬಸವಯ್ಯ (ತಂಬೂರಿ ಪದ), ವೀರಭದ್ರಯ್ಯ (ತತ್ವಪದ ಗಾಯನ), ನಾಗರಾಜಪ್ಪ ವೈ.ಪಿ. (ಕರಡಿಗೆ ವಾದ್ಯ), ಗುರುಸಿದ್ದಯ್ಯ (ತಂಬೂರಿ ಪದ), ಅಪ್ಪಿ (ಜಾನಪದ ಸೂಲಗಿತ್ತಿ), ಲೀಲಾವತಿ (ನಾಟಿ ವೈದ್ಯೆ), ಗೌರಮ್ಮ (ಸೋಬಾನೆ ಪದ, ಅಂಧ ಕಲಾವಿದರು), ಶಿವನಪ್ಪ ಚಂದರಗಿ (ಡೊಳ್ಳು ಕುಣಿತ), ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿ ಪದ), ಇಮಾಂಬಿ ಇಮಾಮಸಾಬ್ ದೊಡ್ಡಮನಿ (ಸೋಬಾನೆ ಪದ), ಬಸಪ್ಪ ಹಡಗಲಿ (ಗೀಗಿ ಪದ), ದಳವಾಯಿ ಚಿತ್ತಪ್ಪ (ಜಾನಪದ ಮಹಾಕಾವ್ಯ),

ಸಾವಕ್ಕಾ ಓಲೇಕಾರ (ಸಂಪ್ರದಾಯ ಪದ), ಈರಯ್ಯ ಮೋಗೆರ(ಕಾರಿನಮನೆ ಮತ್ತು ಹೌಂದೆರಾಯನ ಕುಣಿತ).

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!