10/06/2025 6:40 AM

Translate Language

Home » ಲೈವ್ ನ್ಯೂಸ್ » ಜಾತಿಗಣತಿ’ಗೆ ವಿರೋಧ. ಜಾತಿಗಣತಿ ಅದರೆ ರಕ್ತಕ್ರಾಂತಿಯಾಗುತ್ತೆ.ಬಿಸಿ ಪಾಟೀಲ್ ಎಚ್ಚರಿಕೆ!

ಜಾತಿಗಣತಿ’ಗೆ ವಿರೋಧ. ಜಾತಿಗಣತಿ ಅದರೆ ರಕ್ತಕ್ರಾಂತಿಯಾಗುತ್ತೆ.ಬಿಸಿ ಪಾಟೀಲ್ ಎಚ್ಚರಿಕೆ!

Facebook
X
WhatsApp
Telegram

ನಾಳೆ.16.ಏಪ್ರಿಲ್.25:- ರಾಜ್ಯದಲ್ಲಿ ಒಳಮೀಸಲಾತಿ ಕುರಿತು ಜಾತಿ ಗಣತಿ ವಿರೋಧಿಸಿ ಸಚಿವ ಸಂಪುಟ ಸಭೆಯಲ್ಲಿ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹಾಗೂ ಗೊಂದಲವನ್ನು ಹುಟ್ಟುಹಾಕಿರುವ ವಿವಾದಿತ ಜಾತಿ ಗಣತಿ ವರದಿ ಕುರಿತ ಚರ್ಚೆ ನಡೆಯಲಿವೆ.

ಕಾಂತರಾಜು ಸಮಿತಿಯಿಂದ ವರದಿಯನ್ನು ಈಗಾಗಲೇ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ ಚರ್ಚೆಗೆ ಏಪ್ರಿಲ್ 17ಕ್ಕೆ ಚರ್ಚೆಗೆ ಸ್ವತಃ ಮುಹೂರ್ತ ಇಟ್ಟಿದ್ದಾರೆ.

ಇನ್ನು ಈ ವರದಿಯದ್ದು ಎನ್ನಲಾದ ಜಾತಿವಾರು ಜನಸಂಖ್ಯೆ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಮತ್ತೊಮ್ಮೆ ವೈಜ್ವಾನಿಕವಾಗಿ ಜಾತಿಗಣತಿ ನಡೆಯಬೇಕು ಎಂದಿದ್ದಾರೆ.

ಹೀಗೆ ಭಾರೀ ಚರ್ಚೆ ಹುಟ್ಟುಹಾಕಿರುವ ಜಾತಿಗಣತಿ ವರದಿ ಬಗ್ಗೆ ಬಿಸಿ ಪಾಟೀಲ್ ಮಾತನಾಡಿದ್ದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಮಠಾಧೀಶರು ಈ ನೇತೃತ್ವದ ನೇತೃತ್ವ ವಹಿಸಬೇಕು. ಅವರೇ ಬಂದು ಎಲ್ಲರನ್ನೂ ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ನಡೆದರೆ ಭಾಗವಹಿಸುತ್ತೇನೆ’ ಎಂದಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಬಿಸಿ ಪಾಟೀಲ್ ‘ಹಠಕ್ಕೆ ಬಿದ್ದು ಜಾತಿಗಣತಿಯನ್ನು ಜಾರಿಗೆ ತರಲು ಹೋದರೆ ಮುಂದೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಆಗುತ್ತೆ. ರಕ್ತಕ್ರಾಂತಿಯಾಗುತ್ತೆ’ ಎಂದು ಎಚ್ಚರಿಸಿದರು. ಇನ್ನು ಲಿಂಗಾಯತ ಹಾಗೂ ವೀರಶೈವ ಬೇರೆ ಬೇರೆ ಅಲ್ಲ, ಬೇರೆ ಮಾಡಲು ಯತ್ನಿಸಿದರೂ ಸಾಧ್ಯವಾಗಲ್ಲ ಎಲ್ಲರೂ ಒಂದೇ ಎಂದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!