09/06/2025 1:41 PM

Translate Language

Home » ಲೈವ್ ನ್ಯೂಸ್ » ಚಿಕ್ಕನಾಯಕನಹಳ್ಳಿ | ದಲಿತರ ಜಮೀನು ಕಬಳಿಕೆ – ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ.!

ಚಿಕ್ಕನಾಯಕನಹಳ್ಳಿ | ದಲಿತರ ಜಮೀನು ಕಬಳಿಕೆ – ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ.!

Facebook
X
WhatsApp
Telegram

ತುಮಕೂರು.04.ಮಾರ್ಚ.25:- ಚಿಕ್ಕನಾಯಕನಹಳ್ಳಿ ತಾಲೂಕನಲ್ಲಿ 1982 ರಲ್ಲಿ ಭಾರತ ಸರ್ಕಾರ ಜಾರಿಗೆ ತಂದ ಉಳುವವನೆ ಭೂಮಿ ಒಡೆಯ ಎಂಬ ಕಾಯಿದೆಯಿದ್ದರು ಕೂಡ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಬಾಪುರ ಗ್ರಾಮದ ಜನ ಭೂಮಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

1965 ರಿಂದಲು ಉಳುಮೆ ಮಾಡಿಕೊಂಡು ಬಂದಿದ್ದರು ಕೂಡ ಈಗ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ, ಅದರ ಬದಲು ಒಂದು ತೊಟ್ಟು ವಿಷ ಕೊಡಿ ಕುಡಿದು ನೆಮ್ಮದಿಯಾಗಿ ಪ್ರಾಣ ಬಿಡುತ್ತೇವೆ ಎಂದು ಗ್ರಾಮದ ಸುಮಾರು ನೂರಕ್ಕೂ ಹೆಚ್ಚು ದಲಿತ ರೈತರು ಅಳಲು ತೋಡಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಸರ್ವೆ ನಂ. 46 ರಲ್ಲಿ 300 ಎಕರೆ ಪೈಕಿ 117 ಎಕರೆ ಸರ್ಕಾರಿ ಜಮೀನಲ್ಲಿ ದಲಿತ ರೈತರು ಕುಟುಂಬಸ್ಥರು 1965 ರಿಂದಲು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ 1972ರಲ್ಲಿ ಅಧಿಕಾರಿಗಳು 73 ಮಂದಿ ಅನ್ಯವಾಸಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ.

ಆದರೆ ಇದೀಗ ಈ ಜಾಗ ನಮ್ಮದು ಎಂದು ಹೇಳಿ ಒಕ್ಕಲು ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಈ ಕೂಡಲೇ ಸಂಬಂಧಪಟ್ಟ ಎಲ್ಲ ದಾಖಲೆ ಹಾಗೂ ಜಮೀನನ್ನು ರೈತರ ಹೆಸರಿಗೆ ಮಂಜೂರು ಹಾಗೂ ಹಕ್ಕುಪತ್ರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ದಲಿತರಿಗೆ 1982 ರಲ್ಲಿ ಭಾರತ ಸರ್ಕಾರ ಜಾರಿಗೆ ತಂದ ಉಳುವವನೆ ಭೂಮಿ ಒಡೆಯ ಎಂಬ ಕಾಯಿದೆಯಿದ್ದರು ಕೂಡ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಬಾಪುರ ಗ್ರಾಮ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!