ಬೀದರ.21.ಏಪ್ರಿಲ್.25:- ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿ ನಡೆದ ಗೌತಮ ಬುದ್ಧರ ಮೂರ್ತಿ ಅನಾವರಣ ಹಾಗ. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಭಾಗವಹಿಸಿ, ಮೂರ್ತಿ ಅನಾವರಣಗೊಳಿಸಿ ಮಾತನಾಡಿದರು.
ಮಾನವತೆಯ ದಾರಿದೀಪರಾದ ಗೌತಮ ಬುದ್ಧರು ಶಾಂತಿ, ಅಹಿಂಸೆ ಮತ್ತು ಸಮಾನತೆಯ ಸಂದೇಶವನ್ನು ಸಮಸ್ತ ಮನುಕುಲಕ್ಕೆ ನೀಡಿದ ಮಹಾನರು. ಅವರ ತತ್ವಗಳು ಇಂದಿನ ಸಮಾಜದ ಸಾಂಪ್ರದಾಯಿಕ ಮತ್ತು ಸಾಮಾಜಿಕ ಏಕತೆಯ ನಿರ್ಮಾಣದಲ್ಲಿ ಇನ್ನೂ ಪ್ರಾಸಂಗಿಕವಾಗಿವೆ.
ಬಾಬಾಸಾಹೇಬ ಡಾ. ಭೀಮರಾವ ಅಂಬೇಡ್ಕರ್ ಅವರು ಬುದ್ಧನ ತತ್ವಗಳನ್ನು ತಮ್ಮ ಜೀವನದ ದಾರಿದೀಪವನ್ನಾಗಿ ಮಾಡಿ, ಸಾವಿರಾರು ಜನರಿಗೆ ಮಾನವೀಯತೆಗೆ ಅಕ್ಷಯ ಬೆಳಕನ್ನು ನೀಡಿದರು. ಅವರು ಭಾರತ ಸಂವಿಧಾನವನ್ನು ರೂಪಿಸುವ ಮೂಲಕ ಎಲ್ಲ ವರ್ಗದ ಜನರಿಗೆ ಸಮಾನ ಹಕ್ಕು, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಒದಗಿಸಿದ ಮಹಾಪುರುಷರು ಎಂದು ಸಚಿವ ಖಂಡ್ರೆ ತಿಳಿಸಿದರು.
