12/06/2025 7:56 AM

Translate Language

Home » ಲೈವ್ ನ್ಯೂಸ್ » ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಿ: ಡಾ.ಸಿಂಧೆ ಮನವಿ

ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಿ: ಡಾ.ಸಿಂಧೆ ಮನವಿ

Facebook
X
WhatsApp
Telegram

ಔರಾದ.10.ಜೂನ್.25:- ಡಾ.ಸಿಂಧೆ ಭೀಮಸೇನ್ ರಾವ್ ಅವರು ಸೋಮವಾರ ರಾಜ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಔರಾದ ಮತ್ತು ಕಮಲನಗರ ತಾಲ್ಲೂಕುಗಳ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಗುಣಮಟ್ಟದ ಸೋಯಾಬೀನ್ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.


ರಾಜ್ಯಾದಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬೀದರ್ ಜಿಲ್ಲೆಯ ಔರಾದ (ಬಿ) ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ರೈತರು ಹೊಲಗಳನ್ನು ಹಸನು ಮಾಡಿಕೊಂಡು ರೈತರ ಪ್ರಮುಖ ಬೆಳೆಯಾದ ಸೋಯಾ ಬೀನ್ ಬಿತ್ತನೆ ಮಾಡಲು ಉತ್ತಮ ಗುಣಮಟ್ಟದ ಸೋಯಬೀನ್ ಬಿತ್ತನೆ ಬೀಜಕ್ಕಾಗಿ ರೈತರು ಕಾಯುತ್ತಿದ್ದಾರೆ.

ರೈತರಿಗೆ ಬಿತ್ತನೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕೃಷಿ ಇಲಾಖೆಯಿಂದ ತ್ವರಿತವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸೋಯಾ ಬೀಜದ ಲಭ್ಯತೆ ಅವಶ್ಯಕವಾಗಿರುತ್ತದೆ. ಆದರೆ ಪ್ರಸ್ತುತ ಈ ಭಾಗದಲ್ಲಿ ಹಲವಾರು ರೈತರು ಬೀಜದ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದುದರಿಂದ ಕೃಷಿ ಇಲಾಖೆಯ ಮೂಲಕ ಶಾಶ್ವತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸೋಯಾ ಬೀಜಗಳನ್ನ, ಸರಕಾರದಿಂದ ಅನುಮೋದಿತ, ಪ್ರಮಾಣಿತ ಹಾಗೂ ತಪಾಸಣೆಯಾದ ಬೀಜಗಳನ್ನು, ಸರ್ಕಾರದ ವತಿಯಿಂದ ಸೂಕ್ತ ಸಬ್ಸಿಡಿ ವ್ಯವಸ್ಥೆಯನ್ನು ಜಾರಿಗೊಳಿಸಿ, ರೋಗನಿರೋಧಕ ಕ್ರಮ, ಹಾಗೂ ಜೈವಿಕ ಪದ್ಧತಿಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ರೈತರಿಗೆ ಅಗತ್ಯವಿರುವಷ್ಟು ಉತ್ತಮ ಗುಣಮಟ್ಟದ ಸೋಯಾ ಬೀನ್ ಬಿತ್ತನೆ ಬೀಜಗಳನ್ನು ಸರಬಾಜು ಮಾಡಿದಲ್ಲಿ ರೈತರು ಸಮಯಕ್ಕೆ ತಕ್ಕಂತೆ ಬೆಳೆ ಬಿತ್ತಲು ಸಾಧ್ಯವಾಗುತ್ತದೆ. ಇದರಿಂದಾಗಿ ರೈತರ ಆದಾಯವನ್ನೂ ಹೆಚ್ಚಿಸುತ್ತದೆ ಮತ್ತು “ರೈತರ ಬಾಳಿಗೆ ಬೆಳಕು” ಎಂಬ ದೃಷ್ಟಿ ಕೋನವನ್ನು ಪೂರೈಸುವಲ್ಲಿ ಸಹಕಾರಿಯಾಗುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!