08/06/2025 6:06 PM

Translate Language

Home » ಲೈವ್ ನ್ಯೂಸ್ » ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ, ಸಂಸದ ಶ್ರೀ ಸಾಗರ ಖಂದ್ರೆ

ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ, ಸಂಸದ ಶ್ರೀ ಸಾಗರ ಖಂದ್ರೆ

Facebook
X
WhatsApp
Telegram

. ಬೀದರ್.01.ಜೂನ್.25:- ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ ತಿಳುವಳಿಕೆ ಪತ್ರ ವಿತರಣೆ – ಸಂಸದ ಶ್ರೀ ಸಾಗರ ಖಂಡ್ರೆ

ಬೀದರ ಲೋಕಸಭಾ ಕ್ಷೇತ್ರದ ಗುಡಿಸಲು ಮುಕ್ತಗೊಳಿಸುವ ಸಂಕಲ್ಪದ ಭಾಗವಾಗಿ, ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಭಾಲ್ಕಿ ತಾಲೂಕಿನ 34 ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಒಟ್ಟು 2,202 ಮನೆಗಳ ಮಂಜೂರಾತಿ ಪತ್ರಗಳು ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಟ್ಟವು:

✅(ಪಿಎಂಎವೈ – ಗ್ರಾಮೀಣ) ಅಡಿಯಲ್ಲಿ: 1,424 ಮನೆಗಳು
✅ ಬಸವ ವಸತಿ ಯೋಜನೆ ಅಡಿಯಲ್ಲಿ: 593 ಮನೆಗಳು
✅ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ: 185 ಮನೆಗಳು

ಸಂಸದ ಶ್ರೀ ಸಾಗರ ಖಂಡ್ರೆ ಅವರು ಮಾತನಾಡಿ ಹೇಳಿದರು:
“ಸಾಮಾನ್ಯ ಜನರ ಕನಸುಗಳೇ ನಮ್ಮ ಪ್ರೇರಣೆಯಾಗಿದೆ. ಮನೆ ಎಂಬುದು ಕೇವಲ ಕಟ್ಟಡವಲ್ಲ, ಅದು ಆತ್ಮೀಯತೆಯ ಸಂಕೇತ. ಎಲ್ಲರಿಗೂ ವಸತಿ ಹಕ್ಕು ಸಿಗಬೇಕು ಎಂಬ ದೃಷ್ಟಿಯಿಂದ ನಾವು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತಾ, ಬೀದರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಫಲಾನುಭವಿಗಳಿಗೆ ನೀಡುತ್ತಿದ್ದೇವೆ.”

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಪಾಲ್ಗೊಂಡು ಮಾತನಾಡುತ್ತಾ ಹೇಳಿದರು:
“ಭಾಲ್ಕಿ ಕ್ಷೇತ್ರದಲ್ಲಿ ಈ ಹಿಂದೆ ನಮ್ಮ ಸರ್ಕಾರದಲ್ಲಿಯೇ ನಾನು ಸುಮಾರು 25,000 ಮನೆಗಳನ್ನು ವಿತರಿಸಿ, ಗುಡಿಸಲು ಮುಕ್ತ ಭಾಲ್ಕಿ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯ ಮಾಡಿದ್ದೇನೆ. ಸಂಸದ ಸಾಗರ ಖಂಡ್ರೆ ಅವರು ಕೂಡಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬೀದರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 50,000 ಮನೆಗಳ ಮಂಜೂರಾತಿ ಮಾಡಿಸಿದ್ದಾರೆ. ಅವರು ಜನರ ಹಿತದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.”

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!