ಚಾಮರಾಜನಗರ.22.ಮಾರ್ಚ.25:- ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಗ್ರಾಮಪಂಚಾಯತಿ ಮುಂಭಾಗವಿರುವ ಕುಡಿಯುವ ನೀರಿನ ತೊಂಬೆಯ ಸುತ್ತಲೂ ಮದ್ಯದ ಪೌಚ್ ಗಳು ರಾಶಿಯಾಗಿ ಬಿದ್ದಿದೆ ಹಾಗೂ ಘನ ತ್ಯಾಜ್ಯಗಳಿಂದ ಕೂಡಿದೆ
ಪ್ರತಿ ದಿನ ಈ ನೀರಿನ ತೊಂಬೆಯ ಮೂಲಕವೇ ಕುಡಿಯುವ ನೀರನ್ನು ಸಾರ್ವಜನಿಕರು ತೆಗೆದುಕೊಳ್ಳುತ್ತಾರೆ. ಚರಂಡಿಯಲ್ಲಿ ಹೂಳು ತುಂಬಿ ಗಬ್ಬುನಾರುತ್ತದೆ
ತೊಂಬೆಯ ಸುತ್ತಲೂ ಅನೈರ್ಮಲ್ಯದಿಂದ ಕೂಡಿ ಅನೇಕ ರೋಗಗಳಿಗೆ ಅವಕಾಶಮಾಡಿ ಕೊಟ್ಟಿದೆ.
ಮದ್ಯ ಪ್ರಿಯರಿಗೆ ಈ ನೀರಿನ ತೊಂಬೆಯ ಕೇಂದ್ರಸ್ಥಾನವಾಗಿದೆ ಅಲ್ಲಿಯೇ ಕೂತು ಲೋಟಕ್ಕೆ ಮದ್ಯವನ್ನು ಹಾಕಿ ಆ ನೀರಿನ ತೊಂಬೆಯಲ್ಲಿಯೇ ನೀರು ಮಿಶ್ರಣಮಾಡಿ ಕುಡಿದು ಪೌಚ್ ಮತ್ತು ಲೋಟವನ್ನು ಅಲ್ಲಿ ಇರಿಸುತ್ತಾರೆ.
ಗ್ರಾಮಪಂಚಾಯತಿ ಮುಂಭಾಗನೇ ಅನೈರ್ಮಲ್ಯವಿದ್ದು ಇನ್ನೂ ಗ್ರಾಮದೊಳಗೆ ಇನ್ನೇಷ್ಟು ಸಮಸ್ಯೆಗಳಿದೆ ಎನ್ನುವುದು ಪ್ರಶ್ನೆಯಾಗಿದೆ?. ಇಲ್ಲಿ ಗ್ರಾಮಪಂಚಾಯತಿ ಆಡಳಿತ ನಡೆಸುತ್ತಿದಿಯೋ ಅಥವಾ ಇಲ್ಲವೋ ಎನ್ನುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಕಾರ್ಯನಿರ್ವಹಿಸುತ್ತಿಲ್ಲ ಅದಕ್ಕೆ ಇಂತಹ ಸಮಸ್ಯೆಗಳು ಉದ್ಬವಗೊಂಡಿದೆ.
ಗ್ರಾಮಪಂಚಾಯತಿ ಆಡಳಿತ ಮತ್ತು ಗ್ರಾಮಅಭಿವೃದ್ದಿ ಅಧಿಕಾರಿಗಳು ಗ್ರಾಮಪಂಚಾಯತಿ ಮುಂಭಾಗನೇ ಅನೈರ್ಮಲ್ಯದಿಂದ ಕೂಡಿದ್ದರು ಏಕೆ ? ಮೌನವಾಗಿದ್ದಾರೆ.
ಇವರ ನಿರ್ಲಕ್ಷ್ಯ ತನವನ್ನು ತೋರಿಸುತ್ತಿದ್ದಾರೆಂದು ಸಾರ್ವಜನಿಕರು ತಿಳಿಸಿದರು.
ಕೂಡಲೇ ಜಿಲ್ಲಾ ಮಟ್ಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನಿಸಬೇಕಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಪಂಚಾಯತ್ ರಾಜ್ ಸಚಿವರ ಗಮನಕ್ಕೆ ತರಲಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
