04 ಡಿಸೆಂಬರ್24 ಬೆಂಗಳೂರು ಕರ್ನಾಟಕ ಸರ್ಕಾರ.ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಗಿರಿಜನ ಉಪಯೋಜನೆಯಡಿ ಪ್ರಸಕ್ತ ಸಾಲಿಗೆ ಕುರಿ, ಮೇಕೆ ಘಟಕ ಅನುಷ್ಠಾನಗೊಳಿಸಲು ಫಾಲಾನುಭವಿಗಳ ಆಯ್ಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕು ಪಶು ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು.
ಜಾತಿ ಪ್ರಮಾಣ ಪತ್ರ,
ವಾಸಸ್ಥಳ ದೃಢೀಕರಣ ಪತ್ರ,
ಬ್ಯಾಂಕ್ ಖಾತೆ ನಕಲು ಪತ್ರ,
ಆಧಾರ ಕಾರ್ಡ್,
ಮತದಾರರ ಚೀಟಿ,
ರೇಷನ್ ಕಾರ್ಡ್
ಮತ್ತು ಇತರ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅರ್ಜಿದಾರರು ತಾಲ್ಲೂಕು ಅಥವಾ ಹೋಬಳಿಯ ಕುರಿಗಾರರ ಸಹಕಾರ ಸಂಘದ ಸದಸ್ಯರಾಗಿರಬೇಕು. ಅವಶ್ಯವಿರುವ ಯೋಜನೆಗಳಿಗೆ ಮೊದಲೇ ಬ್ಯಾಂಕ್ನಿಂದ ಸಾಲ ಮಂಜೂರಾತಿ, ಸ್ವಂತ ವಂತಿಗೆ ಭರಿಸಲು ಬದ್ಧರಾಗಿರಬೇಕು ಎಂದು ಹೊಸಪೇಟೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು 16 ಡಿಸೆಂಬರ್ 24 ಕೊನೆಯ ದಿನಾಂಕವಾಗಿರುತ್ತದೆ.