ಬೀದರ.08.ಮಾರ್ಚ.25:-ಬೀದರ ತಾಲೂಕಿನ ಗಾದಗಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಮಹಿಳೆಯರಿಗೆ ಶಾಲುಹೊದಿಸಿ ಅವರಿಗೆ ಹಣ್ಣು ಹಂಪಲವನ್ನು ನೀಡಿ ಸನ್ಮಾನಿಸಲಾಯಿತು ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾಕ್ಟರ್ ಶುಭಾಷ್ ಕರ್ಪೂರ ಅವರು ಮಾತನಾಡಿ ಮಹಿಳಾ ದಿನಾಚರಣೆ ಅಂಗವಾಗಿ ಅವರಿಗೆ ಈಗಿನ ಕಾಲದಲ್ಲಿ ಮಹಿಳೆಯರು ದಿನನಿತ್ಯ ಬಹಳ ತಂಬಾಕು ಸೇವನೆಯನ್ನು ಮಾಡುತ್ತಾರೆ ಅದನ್ನು ಶೀಘ್ರವೇ ನಿಲ್ಲಿಸಬೇಕು ಎಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಅಶೋಕ್ ಕುಮಾರ್ ಕರಂಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಿಳಾ ದಿನಾಚರಣೆಯ ಅಂಗವಾಗಿ ವಿಸ್ತಾರವಾಗಿ ತಿಳಿಸಿದರು.
ಮಹಿಳಾ ದಿನಾಚರಣೆಯನ್ನು 28 ಫೆಬ್ರುವರಿ 1911ರಲ್ಲಿ ಆಸ್ಟ್ರೇಲಿಯಾ ಮತ್ತು ಸ್ವಿಜರ್ಲ್ಯಾಂಡ್ ಹಾಗೂ ಇನ್ನಿತರ ದೇಶಗಳು ಸೇರಿ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಅವರು ಹೇಳಿದರು ಅವರು ಮುಂದೆ ಮಾತನಾಡುತ್ತಾ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಬೇಕಾದರೆ ಅದಕ್ಕೆ ಒಂದು ದಿನಾಂಕವನ್ನು ನಿಗದಿ ಪಡಿಸಬೇಕೆಂದು ಕೆಲವು ರಾಷ್ಟ್ರಗಳು ಮತ್ತೆ ಸಭೆಯನ್ನು ಕರೆದು ಸಭೆಯಲ್ಲಿ ಮಾರ್ಚ್ 8, 1977ರಲ್ಲಿ ಈ ದಿನಾಂಕವನ್ನು ನಿರ್ಧರಿಸಲಾಯಿತು ಅಂದಿನಿಂದ ಇಡೀ ಜಗತ್ತಿನಲ್ಲಿ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವರಾಜ್ ಮಾಡಿಗಿಯವರು ಮಾತನಾಡುತ್ತಾ ತಾವೆಲ್ಲರೂ ಒಂದು ಶಕ್ತಿ ಮಹಿಳೆಯರು ಒಂದು ಶಕ್ತಿಯಿಂದಲೇ ನಾವೆಲ್ಲರೂ ಒಗ್ಗಟ್ಟಾಗಿ ಜೀವನ ಸಾಧಿಸುತ್ತಿದ್ದೇವೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಆನಂದ್ ಕುಮಾರ್, ಮಲ್ಲಿಕಾರ್ಜುನ್ ರಾಗ,ಶಾಂತಿವೀರ್ ಪಾಟೀಲ್, ಜಗದೇವಯ್ಯ ಸ್ವಾಮಿ, ರವಿಕುಮಾರ್, ವೀರಭದ್ರಪ್ಪ ಬುಯ್ಯ, ಕೃಷ್ಣ ಬಚ್ಚಾ, ಪಂಡಿತ್ ಶಂಭು,ಬಸವರಾಜ ಸತೀಶ್ ಮಂಠಾಳೆ ಚಿಂತಲ್ಗೆರ ಮತ್ತು ಹನುಮಂತ ಸಿಂದೋಲ್ ಹಾಗೂ ಗಾದಗಿ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಶ್ರೀಮತಿ ನಾಗಮ್ಮ ಕಾಗೆನೂರು ಅವರು ನಿರೂಪಿಸಿದರು ಸಂಗೀತ ಕರಂಜಿ ಅವರು ಕಾರ್ಯಕ್ರಮವನ್ನು ಸ್ವಾಗತಿಸಿದರು.