ಬೀದರ.22.ಜೂನ್.25:- ವಿಶ್ವವಿದ್ಯಾಲಯ ಬೀದರ ಹಾಗೂ ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು, ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಾದಲ್ಲಿ
ದಿನಾಂಕ: ೧೭-೦೬-೨೦೨೫ ರಂದು ಚಾಲನೆ ನಿಡಲಾಗಿತ್ತು, ಕಾರ್ಯಕ್ರಮವು ಸತತವಾಗಿ ವಾರಗಳವರೆಗೆ ನಡೆಯುವುದು, ಪ್ರತಿ ದಿನ ಬೇರೆ ಬೇರೆ ವಿಷಯಗಳ ಮೇಲೆ ಕಾರ್ಯಕ್ರಮಗಳು ಜರುಗುತ್ತಿವೆ, ಇಂದು ದಿನಾಂಕ: ೨೧-೦೬-೨೦೨೫ ಶಿಬಿರದ ೫ನೇ ದಿನದ “ಮಾನವ ಹಕ್ಕುಗಳ ಕುರಿತು ಉಪನ್ಯಾಸ” ಎಂಬ ವಿಷಯದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಹಾಕವುದರ ಮೂಲಕ ಕ.ಕಾ.ಪ್ರ.ದ ಕಾಲೇಜಿನ ಪ್ರೋ|| ಶಿವಶಂಕರ ಇಂದುಧರ ಉಪ್ಪಿನ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದಲೇ ಪಡೆದಿರುವ ಹಕ್ಕುಗಳು, ಅವುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇವುಗಳು ಎಲ್ಲಾ ಮಾನವರ ಘನತೆ ಮತ್ತು ಸಮಾನತೆಯನ್ನು ಗುರುತಿಸುತ್ತವೆ ಎಂದರು.
ಕಾಲೇಜಿನ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀನಿವಾಸ ಖರಾತೆ ರವರು ಅಧ್ಯಕ್ಷತೆ ವಹಿಸಿದರು.
ಕಾಲೇಜಿನ ದೈಹಿಕ ನೀರ್ದೇಶಕರಾದ ಓಂಕಾರ ಮಾಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರುಗಿತು.
ಡಾ. ಶ್ರೀನಿವಾಸ ಬಂಡಿ ರವರು ಸ್ವಾಗತಿಸಿದರು, ಡಾ. ರಾಜಕುಮಾರ ರಾಠೋಡ ರವರ ನಿರೂಪಿಸಿದರೆ ಕಾಲೇಜಿನ ಡಾ. ಗೋವಿಂದ ಮೋತಿರಾಮ ವಂದಿಸಿದರು.
ಕಾಂiÀiðಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.