|

ಕ.ಕಾ.ಪ್ರ.ದರ್ಜೆ ಕಾಲೇಜು: ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ


ಬೀದರ.17.ಜೂನ್.25:- ಬೀದರ ವಿಶ್ವವಿದ್ಯಾಲಯ ಬೀದರ ಹಾಗೂ ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು, ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಾದಲ್ಲಿ ಜೂನ್ ೧೭, ರಿಂದ ಜೂನ್ ೨೩ರ ವರೆಗೆ ಹಮ್ಮಿಕೋಳ್ಳಲಾಗಿದೆ.


ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿನೆಟ್ಟು ನೀರೆರೆಯುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಾತನಾಡುತ್ತ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಮಾದರಿಯ ಕಾರ್ಯ ನಿರ್ವಹಿಸುತ್ತಿದೆ, ಇಂದಿನಿAದ ಸತತವಾಗಿ ಏಳು ದಿನಗಳ ವರೆಗೆ ಬೇರೆ ಬೇರೆ ವಿಷಯಗಳ ಬಗ್ಗೆ ದಿನಾಲು ಕಾರ್ಯಕ್ರಮ ನಡೆಯುತ್ತಿರುತ್ತವೆ ಇಂತಹ ಕಾರ್ಯಕ್ರಮಗಳ ಉಪಯೋಗ ತೆಗೆದುಕೋಳ್ಳಿ ಎಂದು ಹೇಳಿದರು.


ಚಿಟ್ಟಾ ಗ್ರಾಮ ಪಂಚಾಯತ ಅದ್ಯಕ್ಷರಾದ ಶ್ರೀಮತಿ ಸರಸ್ವತಿ ರವರು ಮತ್ತು ಮ.ಬೊ.ಶಿ. ಸಂಸ್ಥೆಯ ಉಪಾಧ್ಯಕ್ಷರಾದ ಅವಿನಾಶo ಅ.ಚಿಮಕೋಡೆ ಯವರು ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿದರು.


ಸ.ಹಿ.ಪ್ರಾ. ಶಾಲೇಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಆನಂದ ಚಿಟ್ಟಾ ಹಾಗೂ ಸ.ಹಿ.ಪ್ರಾ. ಶಾಲೇಯ ಮುಖ್ಯ ಗುರುಗಳಾದ ಶ್ರೀಮತಿ ಶೋಭಾವತಿ ಆರ್. ಜನಜೀರೆ ರವರು ಅತಿಥಿಸ್ಥಾನ ವಹಿಸಿ ಮಾತನಾಡಿದರು.


ಕಾಲೇಜು ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸರಕಾರವು ವಿಧ್ಯಾರ್ಥಿಗಳಿಗಾಗಿ ಮತ್ತು ವಿಶೇಷವಾಗಿ ಗ್ರಾಮೀಣ ಜನರಿಗಾಗಿ ಅರಿವು ಮೂಡಿಸುವ ಸಲುವಾಗಿ ಸರಕಾರದ ಹಲವು ಯೋಜನೆಗಳಲೋಂದಾದ ಎನ್.ಎಸ್.ಎಸ್ ಶಿಬರವು ಇದೆ, ಇದರ ಸದುಪಯೊಗ ಪಡೆದುಕೋಳ್ಳಬೇಕು ಎಂದರು.


ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಅಧಿಕಾರಿಗಳಾದ ಡಾ. ರಾಠೋಡ ರಾಜಕುಮಾರ ಪ್ರಸ್ತವೀಕ ಮಾತನಾಡಿದರು.
ಶ್ರೀಮತಿ ಲೀಲಾವತಿ ಪೂಜಾರ ಸ್ವಾಗತಿಸಿದರು, ಓಂಕಾರ ಮಾಶೆಟ್ಟಿ ನಿರೂಪಿಸಿದರೆ, ಡಾ.ಗೋವಿಂದ ಜಾದವ ವಂದಿಸಿದರು.


ಕಾAiÀiðಕ್ರಮದಲ್ಲಿ ಶಾಲೇಯ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು

Similar Posts

Leave a Reply

Your email address will not be published. Required fields are marked *