ಚಾಮರಾಜನಗರ.28.ಮಾರ್ಚ್.25:-ಯಳಂದೂರು: ಬಳೇಪೇಟೆಯಲ್ಲಿರುವ ಸವಿತಾ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಗುರುವಾರ ಗುದ್ದಲಿ ಪೂಜೆ ಮಾಡಿದರು.
ಬಳಿಕ ಮಾತನಾಡಿ ಸವಿತ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 10 ಲಕ್ಷ ವೆಚ್ಚದ ಅನುದಾನವನ್ನು ನೀಡಲಾಗಿದೆ. ಗುಣಮಟ್ಟ ಕಾಮಗಾರಿಯನ್ನು ಮಾಡಿಸಿ ಈ ಭವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಚುನಾವಣಾ ಸಂದರ್ಭದಲ್ಲಿ ಸವಿತಾ ಸಮಾಜದವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲಾಗಿದೆ.
ನಮ್ಮ ಕಾಂಗ್ರೆಸ್ ಸರಕಾರ ಎಲ್ಲಾ ಜನಾಂಗದ ಪರವಾಗಿ ಕಾರ್ಯನಿರ್ವಹಿಸುತ್ತದೆ.
ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ನನಗೆ ಅತ್ಯಧಿಕ ಮತ ನೀಡಿ ಜಯಶೀಲಾರನ್ನಾಗಿಸಿದ ಮತದಾರರ ಕ್ಷೇಮಾಭಿವೃದ್ಧಿಯೇ ನನ್ನ ಆಶಯವಾಗಿದೆ.
ಈ ಸಂದರ್ಭದಲ್ಲಿ ಸವಿತ ಸಮಾಜದ ತಾಲ್ಲೂಕು ಅಧ್ಯಕ್ಷ ರಾದ ಶ್ರೀಕಂಠಸ್ವಾಮಿ, ಪಪಂ ಅಧ್ಯಕ್ಷೆ ಲಕ್ಷ್ಮೀ, ಲಿಂಗರಾಜು ಮೂರ್ತಿ, ಶ್ರೀನಿವಾಸ್, ಪಪಂ ಸದಸ್ಯ ರಂಗನಾಥ್, ಮುನಾವರ್ ಬೇಗಂ, ಹಾಗೂ ಸವಿತ ಸಮಾಜದ ಯಜಮಾನರು, ಮುಖಂಡರು ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
